More

    ತಮ್ಮನನ್ನು ಕಾಪಾಡಲು ಅಣ್ಣ, ಇಬ್ಬರನ್ನು ರಕ್ಷಿಸಲು ಮತ್ತೋರ್ವ ಸಹೋದರ ಕೃಷಿ ಹೊಂಡಕ್ಕೆ ಬಿದ್ದು ಸಾವು

    ಬೀದರ್: ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ‌ಮೂವರು ಸಹೋದರರು ನೀರು ಪಾಲಾಗಿರುವ ಭೀಕರ ಘಟನೆ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಚಳಕಾಪುರ ವಾಡಿಯಲ್ಲಿ ನಡೆದಿದೆ.

    ಮೊದಲು 16 ವರ್ಷದ ಕಿರಿಮಗ ಹನುಮಂತ ರೆಡ್ಡಿ ಕೃಷಿ ಹೊಂಡದಲ್ಲಿ ಕೈಕಾಲು ಮುಖ ತೊಳೆದುಕೊಳ್ಳಲು ಹೋಗಿ ಕಾಲು ಜಾರಿ ನೀರಿನಲ್ಲಿ ಬೀಳುತ್ತಾನೆ. ಆತನ ರಕ್ಷಣೆಗೆ ಹೋದ ಎರಡನೇ ಸಹೋದರ ಕರಿಬಸಪ್ಪ (18) ಕೂಡ ನೀರಿನಲ್ಲಿ ಸಿಲುಕುತ್ತಾನೆ. ಇಬ್ಬರನ್ನು ರಕ್ಷಿಸಲು ಮುಂದಾದ ಇನ್ನೊರ್ವ ಸಹೋದರ ಈರಪ್ಪನೂ ಸಹ ನೀರಿನಲ್ಲಿ ಮುಳಗಿ ಜೀವ ಕಳೆದುಕೊಳ್ಳುತ್ತಾನೆ.

    ಇದನ್ನೂ ಓದಿ: ಜನರ ತಲೆಗೆ ಹುಳ ಬಿಟ್ಟ ಈ ಜೀವಿ ಯಾವುದು ಗುರುತಿಸುವಿರಾ?: 15 ಅಡಿ ಉದ್ದ, ಎಲ್ಲವೂ ನಿಗೂಢ!

    ಮೂವರ ಸಹೋದರ ಪೈಕಿ ಯಾರಿಗೂ ಈಜಲು ಬರದ ಹಿನ್ನೆಲೆಯಲ್ಲಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹಳ್ಳಿಖೇಡ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮೃತರು ಖಟಕಚಿಂಚೋಳಿಯ ಮೂಲದವರಾಗಿದ್ದು, ಜಮೀನಿನಲ್ಲಿ ಕೆಲಸ ಮಾಡಿದ ಬಳಿಕ ಮೂವರೂ ಕೃಷಿ ಹೊಂಡಕ್ಕೆ ಹೋದಾಗ ದುರಂತ ಸಂಭವಿಸಿದೆ. (ದಿಗ್ವಿಜಯ ನ್ಯೂಸ್​)

    ನನ್ನ ಮಗನನ್ನು ಬಿಟ್ಬಿಡು ನಿಂಗೇನು ಬೇಕು ತೆಗೆದುಕೋ: ಕಾಮುಕನ ಕೈಗೆ ಸಿಕ್ಕ ಮಹಿಳೆ ಬಚಾವ್​ ಆಗಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts