ಬೆಂಗಳೂರು: ಡಿಜೆ ಹಳ್ಳಿ ಗಲಭೆಯ ಬಗೆಗಿನ ಸತ್ಯಾಂಶಗಳನ್ನು ತೆರೆದಿಟ್ಟಿದ್ದಕ್ಕೆ ದಿಗ್ವಿಜಯ ನ್ಯೂಸ್ 24X7 ವಾಹಿನಿಯ ನ್ಯೂಸ್ ಆ್ಯಂಕರ್ಗೆ ಜೀವ ಬೆದರಿಕೆ ಕರೆ ಬಂದಿದೆ.
ಆ್ಯಂಕರ್ ರಕ್ಷತ್ ಶೆಟ್ಟಿ ಅವರಿಗೆ ವಿದೇಶದಿಂದ ಪದೇಪದೆ ಕರೆ ಬರುತ್ತಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಮಾದರಿಯಲ್ಲಿ ಹತ್ಯೆಗೈಯುವ ಎಚ್ಚರಿಕೆ ನೀಡಿದ್ದು, ಎಸ್ಡಿಪಿಐ ಬಗ್ಗೆ ಮಾತನಾಡದಂತೆ ಅನಾಮಧೇಯನೊಬ್ಬ ತಾಕೀತು ಮಾಡಿದ್ದಾನೆ.
ಇದನ್ನೂ ಓದಿ: ಕಾಂಗ್ರೆಸ್, ಎಸ್ಡಿಪಿಐ ನಡುವಿನ ರಾಜಕೀಯ ವೈಮನಸ್ಯದಿಂದ ಗಲಭೆ ನಡೆದಿದೆ: ಬಸವರಾಜ್ ಬೊಮ್ಮಾಯಿ
ಗೊಡ್ಡು ಬೆದರಿಕೆಗೆ ಮಣಿಯಲ್ಲ
ಇಂತಹ ಅನಾಮಧೇಯರ ಗೊಡ್ಡು ಬೆದರಿಕೆಗೆ ದಿಗ್ವಿಜಯ ನ್ಯೂಸ್ ಎಂದಿಗೂ ಮಣಿಯುವುದಿಲ್ಲ. ಸತ್ಯಾಂಶವನ್ನು ತೆರೆದಿಡಲು ನಿಷ್ಠುರವಾದ ಸುದ್ದಿಯ ಪ್ರಸಾರ ಮಾಡುವುದನ್ನು ಎಂದಿಗೂ ಬಿಡುವುದಿಲ್ಲ. ಜನರಿಗೆ ಸತ್ಯವನ್ನು ತಿಳಿಸುವುದೇ ದಿಗ್ವಿಜಯ ವಾಹಿನಿಯ ಧ್ಯೇಯವಾಗಿದ್ದು, ಯಾವುದೇ ಕಾರಣಕ್ಕೂ ಸುದ್ದಿ ನಿಲ್ಲಿಸುವ ಮಾತೇ ಇಲ್ಲ. ಇದು ಸಮಸ್ತ ವೀಕ್ಷಕ ಪ್ರಭುಗಳಿಗೆ ದಿಗ್ವಿಜಯ ನ್ಯೂಸ್ನ ವಾಗ್ದಾನವಾಗಿದೆ.