ಮುಂಬೈ : ದೇಶದ ಮಂದಿರಗಳು, ಏರ್ಪೋರ್ಟ್ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸುವ ಬೆದರಿಕೆಯುಳ್ಳ ಈ-ಮೇಲ್ ಒಂದು ಸಿಆರ್ಪಿಎಫ್ ಮುಂಬೈ ಕಚೇರಿ ತಲುಪಿದೆ. ಈ ಮೇಲ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಕೊಲ್ಲುವ ಬೆದರಿಕೆ ಕೂಡ ಇದೆ ಎನ್ನಲಾಗಿದೆ.
ಭಾರತದಲ್ಲಿ ಲಷ್ಕರ್-ಎ-ತೈಬಾದ ಆತಂಕವಾದಿಗಳು ಮುಚ್ಚಿಟ್ಟುಕೊಂಡಿದ್ದಾರೆ. ಮೂರು ರಾಜ್ಯಗಳಲ್ಲಿ 200 ಕಿಲೋಗ್ರಾಮ್ ಹೈಗ್ರೇಡ್ ಆರ್ಡಿಎಕ್ಸ್ ಶೇಖರಿಸಲಾಗಿದೆ. ಮತ್ತು 11 ಸೂಯಿಸೈಡ್ ಬಾಂಬರ್ಗಳು ದಾಳಿ ನಡೆಸಲು ಸಿದ್ಧರಾಗಿದ್ದಾರೆ ಎಂದು ಈ-ಮೇಲ್ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪ್ಲೀಸ್ ನಕ್ಸಲ್ ಅಂಕಲ್… ಅಪ್ಪನನ್ನು ಮನೆಗೆ ಕಳುಹಿಸಿ… ಅವರಿಗೆ ಏನೂ ಮಾಡಬೇಡಿ….
ಅಮಿತ್ ಷಾ ಅವರನ್ನು ಮತ್ತು ಆದಿತ್ಯನಾಥರನ್ನು ಸೂಯಿಸೈಡ್ ಅಟ್ಯಾಕ್ ಮೂಲಕ ‘ಎಲಿಮಿನೇಟ್’ ಮಾಡುವುದಾಗಿ ಸದರಿ ಮೇಲ್ನಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ-ಮೇಲ್ನ ಮೂಲವನ್ನು ಕಂಡುಹಿಡಿಯುವ ಪ್ರಯತ್ನದೊಂದಿಗೆ ಸಿಆರ್ಪಿಎಫ್ ಮತ್ತು ಬೇಹುಗಾರಿಕೆ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ, ಚೇನಬ್ ಬ್ರಿಡ್ಜ್ನ ಆರ್ಚ್ ರೆಡಿ