ಚಿಕ್ಕೋಡಿ: ಇಲ್ಲೊಂದು ಯೋಜನೆ ಏನೇ ಆದರೂ ಡಿಸೆಂಬರ್ 35ರ ಒಳಗೆ ಉದ್ಘಾಟನೆ ಆಗಲಿದೆ. ಅಷ್ಟರೊಳಗೆ ಅದನ್ನು ಮುಗಿಸುವಂತೆ ಗಡುವು ನೀಡಲಾಗಿದೆ. ಯೋಜನೆಯೊಂದರ ಕುರಿತಾಗಿ ಶಾಸಕರೊಬ್ಬರು ಮಾತನಾಡಿರುವ ಈ ವಿಡಿಯೋ ಇದೀಗ ವೈರಲ್ ಆಗಿದೆ.
ಕಾಗವಾಡದ ಶಾಸಕ ಶ್ರೀಮಂತ ಪಾಟೀಲ್ ಅವರು ಬಸವೇಶ್ವರ ಏತ ನೀರಾವರಿ ಯೋಜನೆಯ ಕುರಿತಾಗಿ ಮಾತನಾಡುವಾಗ ಆದ ಎಡವಟ್ಟು ಗಮನ ಸೆಳೆಯಲಾರಂಭಿಸಿದ್ದು, ಆ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಬೇವನೂರ ಗ್ರಾಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಅವರು ಈ ಎಡವಟ್ಟು ಮಾಡಿಕೊಂಡಿದ್ದಾರೆ.
ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಡಿಸೆಂಬರ್ 35ರ ಒಳಗೆ ಪೂರ್ಣಗೊಳಿಸಿ, ಉದ್ಘಾಟನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಮಾತಿನ ಭರದಲ್ಲಿ ಅವರು ದಿನಾಂಕವನ್ನು ತಪ್ಪಾಗಿ ಉಲ್ಲೇಖಿಸಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ.
ಅನ್ಲೋಡ್ ಮಾಡುವಾಗ ಜೀವವೇ ಹೋಯ್ತು; ಹೃದಯಕ್ಕೇ ಹಾನಿಯಾಗಿ ನಿಂತಲ್ಲೇ ಸಾವು..