ಐಪಿಎಲ್ 17ನೇ ಆವೃತ್ತಿ ಪ್ರಾರಂಭವಾದಗಿನಿಂದಲೂ 10 ಬಲಿಷ್ಠ ತಂಡಗಳ ನಡುವೆ ಭರ್ಜರಿ ಪೈಪೋಟಿ ಕಂಡುಬಂದಿದ್ದು, ಪ್ರತಿ ಪಂದ್ಯವೂ ರೋಚಕವಾಗಿ ಮೂಡಿಬರುತ್ತಿದೆ. ಸದ್ಯ ಅಂಕಪಟ್ಟಿಯಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಸ್ಥಾನವನ್ನು ಅಲಂಕರಿಸಿದ್ದರೆ, ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಸತತ ಸೋಲುಗಳಿಂದ 8ನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ರೈಲಿಗೆ ಸಿಲುಕಿ ಮೂವರು ಯುವಕರ ದುರ್ಮರಣ; ಛಿದ್ರವಾದ ಮೃತದೇಹಗಳು
ಇಡೀ ಐಪಿಎಲ್ ಆವೃತ್ತಿಯಲ್ಲಿ ಎಲ್ಲರ ಕಣ್ಣು ಐದು ಬಾರಿ ಐಪಿಎಲ್ ಚಾಂಪಿಯನ್ಸ್ ಪಟ್ಟ ಪಡೆದಿರುವ ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮೇಲಿತ್ತು. ಆದರೆ, ಈ ಎರಡು ಟೀಮ್ಗಳು ಅದ್ಯಾಕೋ ಸತತ ಸೋಲುಗಳಿಂದ ಮತ್ತು ಯಶಸ್ವಿ ಪ್ರದರ್ಶನ ನೀಡದೆ ಹೀನಾಯ ಸೋಲನ್ನು ಅನುಭವಿಸುತ್ತಿದೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಕೊಂಚ ಗೊಂದಲ ಮೂಡಿಸಿದ್ದೇ ಆದರೂ ಸೋಲಿನ ಹಿಂದಿರುವ ಅಸಲಿ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ.
ಈ ಎರಡು ಚಾಂಪಿಯನ್ಸ್ ತಂಡಗಳ ಸೋಲಿನ ಬಗ್ಗೆ ಅಚ್ಚರಿ ಸಂಗತಿ ಬಿಚ್ಚಿಟ್ಟ ಮಾಜಿ ಟೀಂ ಇಂಡಿಯಾ ಆಟಗಾರ ಅಂಬಟಿ ರಾಯಡು, ಎಂಐ ಹಾಗೂ ಸಿಎಸ್ಕೆ ಮಧ್ಯೆ ಇರುವ ಒಂದು ದೊಡ್ಡ ವ್ಯತ್ಯಾಸವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. 2013, 2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ನಲ್ಲಿದ್ದು ಚಾಂಪಿಯನ್ ಆಗಿದ್ದರು. ತದನಂತರ ಚೆನ್ನೈ ತಂಡದಲ್ಲಿ ಅದ್ದೂರಿ ಪ್ರದರ್ಶನ ನೀಡುವ ಮೂಲಕ ಎಲ್ಲರಿಂದ ಅಪಾರ ಮೆಚ್ಚುಗೆ ಗಳಿಸಿದ್ದರು. ಎರಡು ತಂಡಗಳಲಿದ್ದ ಅಂಬಟಿಗೆ, ಅವರ ನ್ಯೂನತೆ ಮತ್ತು ಬಲ ಏನು ಎಂಬುದು ಚೆನ್ನಾಗಿ ಗೊತ್ತಿತ್ತು ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿದೆ.
ಇದನ್ನೂ ಓದಿ: ಹೂಡಿಕೆದಾರರ ಇರಲಿ ಎಚ್ಚರಿಕೆ: ಅದಾನಿ ಪವರ್ ಸೇರಿ ಈ 9 ಕಂಪನಿಗಳ ಪ್ರವರ್ತಕರು ಷೇರು ಒತ್ತೆ ಇಟ್ಟು ಪಡೆದಿದ್ದಾರೆ ಸಾಲ..
“ಈ ತಂಡಗಳ ಸಂಸ್ಕೃತಿ ಬಿಡಿಸಿ ಹೇಳುವುದಾದರೆ, ಸಿಎಸ್ಕೆ ಗೆಲುವಿಗೆ ಏನು ಬೇಕೋ ಅದರ ಬಗ್ಗೆ ಮಾತ್ರ ಹೆಚ್ಚು ಗಮನಹರಿಸುತ್ತದೆ. ಅವರು ಎಂದಿಗೂ ಫಲಿತಾಂಶದ ಕುರಿತು ತಲೆಕೆಡಿಸಿಕೊಳ್ಳಲ್ಲ. ಆದರೆ, ಈ ವಿಷಯದಲ್ಲಿ ಮುಂಬೈ ಇಂಡಿಯನ್ಸ್ನವರು ಹಾಗಲ್ಲ. ಇವರಿಗೆ ಗೆಲುವು ಬೇಕೇ ಬೇಕು. ಹಾಗಾಗಿ ಗೆಲುವಿನ ಬಗ್ಗೆಯೇ ಹೆಚ್ಚು ಚಿಂತಿಸುತ್ತಾರೆ. ಗೆಲುವೇ ಎಲ್ಲಾ ಎಂಬುದೇ ಅವರ ಸಂಸ್ಕೃತಿ” ಎಂದು ಬಹಿರಂಗವಾಗಿ ಹೇಳಿದ್ದಾರೆ,(ಏಜೆನ್ಸೀಸ್).
ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್ ಜ್ಯಾಕ್ಸ್ ಬಿಚ್ಚಿಟ್ರು ಶಾಕಿಂಗ್ ಸಂಗತಿ
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು