More

    ಪಾಕ್​ ವಿರುದ್ಧ ರೋಚಕ ಜಯ ಗಳಿಸಿದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು?

    ಮೆಲ್ಬೋರ್ನ್: ಟಿ20 ವಿಶ್ವಕಪ್​ 2022ರ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ರೋಚಕ ಜಯ ಗಳಿಸಿದ್ದು, ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿರುವ ಭಾರತೀಯರು ಕೂಡ ಈ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.

    ಮತ್ತೊಂದೆಡೆ ಪಾಕ್​ ವಿರುದ್ಧದ ಈ ಅಮೋಘ ವಿಜಯದ ಬಳಿಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು, ಈ ಪಂದ್ಯದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಅತ್ಯುತ್ತಮ ಇನ್ನಿಂಗ್ಸ್​ಗಳಲ್ಲೊಂದು. ಈ ಪಂದ್ಯದ ಗಾತ್ರ ವಿಶಿಷ್ಟವಾದುದು. ಇಂಥ ಒಂದು ಪಂದ್ಯದಲ್ಲಿ ಆಟ ಆಡಿದ್ದು ನನ್ನ ಅದೃಷ್ಟ. ಬಹುಶಃ ಈಗ ಜನರು ದೀಪಾವಳಿ ಹಬ್ಬವನ್ನು ಸಂಭ್ರಮಿಸಬಹುದು ಎಂದ ವಿರಾಟ್, ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ.

    ಭಾರತ ತಂಡ ಪಾಕ್​ ವಿರುದ್ಧ 160 ರನ್​ಗಳ ಗುರಿಯನ್ನು 4 ವಿಕೆಟ್​ಗಳ ಅಂತರದಲ್ಲಿ ತಲುಪಿ ಗೆಲುವನ್ನು ಸಾಧಿಸಿದೆ. ಭಾರತಕ್ಕೆ ಗೆಲುವು ಕಠಿಣವಾಗಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದರು. ಅಜೇಯ 82 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

    ಹಬ್ಬಕ್ಕೆ ಊರಿಗೆ ಹೊರಟಿದ್ದವ ರಸ್ತೆ ಗುಂಡಿಗೆ ಬಲಿ: ಹೊಂಡ ತಪ್ಪಿಸಲು ಹೋಗಿ ಬಿದ್ದ ಬೈಕ್​ ಸವಾರನ ಮೇಲೇ ಸಾಗಿದ ಲಾರಿ

    ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್, ರಮ್ಯಾಗೇ ನೋ ಎಂಟ್ರಿ; ಕೋಪಗೊಂಡು ವಾಪಸ್​ ಹೋದ ನಟಿ

    ನಟ ಚೇತನ್​ ವಿವಾದಾತ್ಮಕ ಹೇಳಿಕೆಗೆ ಪೇಜಾವರಶ್ರೀ ಪ್ರತಿಕ್ರಿಯೆ; ಬ್ರಾಹ್ಮಣತ್ವವನ್ನು ವ್ಯಾಖ್ಯಾನಿಸಿದ ಸ್ವಾಮೀಜಿ ಹೇಳಿದ್ದಿಷ್ಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts