ಬೆಂಗಳೂರು: ಕಾನ್ಸ್ಟೆಬಲ್ ಹುದ್ದೆಗೆ ಮರಳಲು ಮನವಿ ಮಾಡಿದ ಪ್ರೊಬೆಷನರಿ ಪಿಎಸ್ಐಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅನುಮತಿ ನೀಡಿದ್ದಾರೆ. ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯ ಎಸ್ಐ ವಿ. ರಮೇಶ್ ಹೆಡ್ ಕಾನ್ಸ್ಟೆಬಲ್ ಹುದ್ದೆಗೆ ವಾಪಸ್ ಆಗಿದ್ದಾರೆ.
ಮುಂಬಡ್ತಿ ಪಡೆದು ಮೈಸೂರಿನಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದು, 2017ರಲ್ಲಿ ಸಿವಿಲ್ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು. 2017ರ ಡಿಸೆಂಬರ್ನಿಂದ ಬನಶಂಕರಿ ಸಂಚಾರ ಠಾಣೆಯಲ್ಲಿ ಪ್ರೊಬೆಷನರಿ ಅವಧಿ ಆರಂಭಿಸಿದರು. ಪ್ರಸ್ತುತ ಎಸ್.ಜೆ. ಪಾರ್ಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಬೆಂಗಳೂರಿಗರ ಗಮನಕ್ಕೆ- ಜುಲೈನಿಂದ ತ್ಯಾಜ್ಯ ನಿರ್ವಹಣಾ ಕರ ಜಾರಿ
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮೈಸೂರು ನಗರ ಹೆಡ್ಕಾನ್ಸ್ಟೆಬಲ್ ಹುದ್ದೆಗೆ ವಾಪಸ್ ಕಳುಹಿಸುವಂತೆ ಆಯುಕ್ತರಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ರನ್ನು ಎಸ್ಐ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆಯುಕ್ತರು ಕಳುಹಿಸಿದ್ದಾರೆ.
ಸಿಇಟಿ, ನೀಟ್ ಆಕಾಂಕ್ಷಿಗಳ ಗಮನಕ್ಕೆ – ದಯಾನಂದ ಸಾಗರ್ ವಿವಿಯಲ್ಲಿ ಇಂದಿನಿಂದ ಉಚಿತ ಆನ್ಲೈನ್ ಕೋಚಿಂಗ್