ಬೆಂಗಳೂರು: ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಉಪನಿಯಮ-2020ಕ್ಕೆ ಸರ್ಕಾರ ಅಂಕಿತ ಹಾಕಿದ್ದು, ಮಾಸಿಕ ಕರ ವಸೂಲಿಯನ್ನು ಜುಲೈನಿಂದ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ತಿಳಿಸಿದ್ದಾರೆ.
ವಾಸದ ಮನೆಗಳು, ವಾಣಿಜ್ಯ ಕಟ್ಟಡಗಳು, ಹೆಚ್ಚು ತ್ಯಾಜ್ಯ ಉತ್ಪಾದಿಸುವ ಕೇಂದ್ರಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಘನತ್ಯಾಜ್ಯ ನಿರ್ವಹಣಾ ಉಪನಿಯಮಕ್ಕೆ ಅಂಕಿತ ಹಾಕಿದೆ. ತ್ಯಾಜ್ಯದ ಕರವನ್ನು ಮಾಸಿಕ ಅಥವಾ ವಾರ್ಷಿಕ ವಸೂಲಿ ಮಾಡುವ ಕುರಿತು ಗೊಂದಲಗಳಿದ್ದು, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಜುಲೈ ಆರಂಭದಿಂದ ತ್ಯಾಜ್ಯ ಕರ ವಸೂಲಿ ಹಾಗೂ ದಂಡ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ನ್ಯಾಯಾಲಯಗಳ ವಿರುದ್ಧ ವೃಥಾ ಟೀಕೆ ಅಕ್ಷಮ್ಯ
1.08 ಲಕ್ಷ ರೂ. ದಂಡ ವಸೂಲಿ: ಬಿಬಿಎಂಪಿ ಮಾರ್ಷಲ್ಗಳು ನಗರದಲ್ಲಿ ಮಾಸ್ಕ್ ಹಾಕದ ಸಾರ್ವಜನಿಕರಿಂದ ತಲಾ 200 ರೂ. ದಂಡ ವಿಧಿಸುವ ಕಾರ್ಯವನ್ನು ಮಂಗಳವಾರ ಆರಂಭಿಸಿದ್ದಾರೆ. ಕಳೆದ ಎರಡು ದಿನದಲ್ಲಿ ಮಾಸ್ಕ್ ಹಾಕದೆ ಸಂಚಾರ ಮಾಡುತ್ತಿದ್ದ 544 ಜನರಿಗೆ 1,08,800 ರೂ. ದಂಡ ವಿಧಿಸಿದ್ದಾರೆ.