“ಬೆಂಗಳೂರು ನಿವಾಸಿಗಳಲ್ಲಿ ಒಂದು ಮನವಿ, ಇಂದು (ಮಾರ್ಚ್ 18) ರಾತ್ರಿ 10 ಗಂಟೆಯ ನಂತರ, ನಾಳೆ ಮುಂಜಾನೆ 5ಗಂಟೆವರೆಗೆ ಯಾರೂ ಮನೆಗಳಿಂದ ಹೊರಗೆ ಬರಬೇಡಿ. ಕರೊನಾ ವೈರಸ್ ನಿರ್ಮೂಲನೆಗಾಗಿ ಇಡೀ ಬೆಂಗಳೂರಿನಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಹಾಗಾಗಿ ಎಲ್ಲರೂ ಮನೆಯೊಳಗೇ ಇರಿ… ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಬೆಂಗಳೂರು ನಿವಾಸಿಗಳಿಗೆ ತಿಳಿಸಿ…. ”
(Hello, every one in Bangalore: It is a request not to come out of your house after 10 pm tonight till tomorrow 5 am…. As their will be spraying medicine in the air in order to kill the COVID-19!! Share this information to all your friends,relatives and your families only in Bangalore…
Thank you!)
ಈ ಮೆಸೇಜ್ ನಿಮ್ಮ ವಾಟ್ಸ್ಆ್ಯಪ್ಗೆ ಬಂದಿದ್ದರೆ, ನೀವು ಫೇಸ್ಬುಕ್, ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಓದಿದ್ದರೆ ದಯವಿಟ್ಟು ಅದನ್ನು ನಂಬಬೇಡಿ. ಯಾಕೆಂದರೆ ಇದು ಅಕ್ಷರಶಃ ಸುಳ್ಳು.
ಇದು ಬಿಬಿಎಂಪಿಯಿಂದಾಗಲೀ, ಸರ್ಕಾರದಿಂದಾಗಲೀ ಬಂದ ಅಧಿಕೃತ ಮಾಹಿತಿ ಅಲ್ಲ. ಬೇರೆ ಯಾರೋ ಕರೊನಾ ವೈರಸ್ ಹೆಸರಲ್ಲಿ ರೂಮರ್ ಹಬ್ಬಿಸುತ್ತಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈರಲ್ ಆಗುತ್ತಿರುವ ಈ ಮೆಸೇಜ್ ಬಗ್ಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಇಂತಹ ಸೂಚನೆಗಳನ್ನು ನಾವು ಕೊಟ್ಟಿಲ್ಲ ಎಂದು ಫೇಸ್ಬುಕ್, ಟ್ವಿಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಬಿಬಿಎಂಪಿ ಬೆಂಗಳೂರು ನಗರದಲ್ಲಿ ರಾತ್ರಿ 10 ಗಂಟೆ ನಂತರ ಯಾವುದೇ ಔಷಧಿಯನ್ನೂ ಸಿಂಪಡಿಸುತ್ತಿಲ್ಲ. ಹೊರಗೆ ಬರಬೇಡಿ ಎಂಬಂತಹ ಸೂಚನೆಗಳನ್ನು ಪಾಲಿಕೆ ನೀಡಿಲ್ಲ. ವದಂತಿಗಳನ್ನು ನಂಬಬೇಡಿ. ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗೆ 104ಕ್ಕೆ ಕರೆ ಮಾಡಿ. ನಿಮಗೆಲ್ಲ ಸಹಾಯ ಮಾಡಲು ನಮಗೆ ನೀವು ಸಹಕರಿಸಿ..ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.
ಇನ್ನು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರೂ ಸಹ ಟ್ವೀಟ್ ಮಾಡಿದ್ದು, ನಾಗರಿಕರೇ ದಯವಿಟ್ಟು ವಾಟ್ಸ್ಆ್ಯಪ್ನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡಬೇಡಿ. ಯಾವುದೇ ಔಷಧಿಗಳನ್ನು ಸಿಂಪಡಿಸಲು ಬಿಬಿಎಂಪಿ ಯೋಜನೆ ಹಾಕಿಕೊಂಡಿಲ್ಲ. ಸದ್ಯಕ್ಕೆ ರೂಮರ್ಗಳಿಂದ ದೂರ ಉಳಿಯುವುದೇ ಒಂದು ಒಳ್ಳೆಯ ಔಷಧಿ ಎಂದಿದ್ದಾರೆ.
There is no such directive from BBMP. Don't fall prey to rumours. Call 104 for any help.
Help us to help you. #COVID2019india https://t.co/J7sZllErVK
— M Goutham Kumar (@BBMP_MAYOR) March 18, 2020
Dear Citizens, don’t fall prey to rumours on Whatsapp & other Social Media platforms. #BBMP has no plans to spray any medicine for #COVID19. The best medicine is to stay away from rumours!
Here is an accompanying advisory for accessing Parks & Gardens#Bengaluru #COVID2019india pic.twitter.com/xy30jh75wI
— B.H.Anil Kumar,IAS (@BBMPCOMM) March 18, 2020
ಕರೊನಾದೊಂದಿಗೆ ಕಾಡುತ್ತಿವೆ ಇನ್ನೂ ಕೆಲವು ಕಾಯಿಲೆಗಳು; ಬೀದರ್ನಲ್ಲಿ 20ಕ್ಕೂ ಅಧಿಕ ಮಂದಿಗೆ ಚಿಕೂನ್ಗುನ್ಯಾ