More

    ಕೋವಿಡ್-19 ನಿಯಮಾವಳಿ ಪಾಲಿಸಿ

    ತೇರದಾಳ: ಸಾರ್ವಜನಿಕರು ಕೋವಿಡ್-19 ನಿಯಮಾವಳಿ ಪಾಲಿಸಿ ದಂಡ ಕಟ್ಟುವುದನ್ನು ತಪ್ಪಿಸಬೇಕು. ಪರಸ್ಪರ ಅಂತರದೊಂದಿಗೆ ವ್ಯಾಪಾರ-ವಹಿವಾಟು ನಡೆಸಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಸಮೀಪದ ಹನಗಂಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ಹೆಚ್ಚುವರಿ ಮೂರು ಕೊಠಡಿಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ, ಶಾಲೆ ಉತ್ತಮ ವಾತಾವರಣ ಹೊಂದಿದೆ. ಶಿಕ್ಷಕರು, ಆಡಳಿತ ಮಂಡಳಿಯವರು ವಿವಿಧ ಬೇಡಿಕೆಗಳ ಬಗ್ಗೆ ತಿಳಿಸಿದ್ದು ಅವೆಲ್ಲವನ್ನು ಪೂರೈಸಲು ಪ್ರಯತ್ನಿಸಲಾಗುವುದು ಎಂದರು.

    ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಮಠಪತಿ, ಜಮಖಂಡಿ ತಾಪಂ ಅಧ್ಯಕ್ಷೆ ಸುನಂದಾ ಮುಗಳಖೋಡ, ಸದಸ್ಯೆ ಲಲಿತಾ ನಂದೆಪ್ಪನವರ, ಜಿಪಂ ಮಾಜಿ ಅಧ್ಯಕ್ಷ ಪಾಲಭಾಂವಿ, ಮುಖ್ಯಗುರುಮಾತೆ ಶಾರದಾ ಮುಳ್ಳೂರ, ಗ್ರಾಮದ ಹಿರಿಯರಾದ ಪ್ರಸನ್ನಕುಮಾರ ದೇಸಾಯಿ, ಬಸನಗೌಡ ಪಾಟೀಲ, ರಾವಸಾಬ ಗುಬಚಿ, ಅಲ್ಲಾಭಕ್ಷ ಅಲಾಸ್ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts