ಗಂಗೊಳ್ಳಿ: ತ್ರಾಸಿ ಬೀಚ್ನಲ್ಲಿ ಮಂಗಳವಾರ ಮಧ್ಯಾಹ್ನ ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮೇವುಂಡಿ ನಿವಾಸಿ ಫೀರಸಾಬ ನದಾಫ್(22) ಎಂಬುವರು ಸಮುದ್ರಪಾಲಾಗಿದ್ದಾರೆ.
ಸಿದ್ದು ಹನುಮಂತಪ್ಪ ಮತ್ತು ಸಿರಾಜ್ ಎಂಬುವರೊಂದಿಗೆ ಟ್ಯಾಂಕರ್ನಲ್ಲಿ ತ್ರಾಸಿ ಬೀಚ್ಗೆ ಬಂದಿದ್ದ ಫೀರ್ಸಾಬ್ ನದಾಫ್ ತ್ರಾಸಿ ಬೀಚ್ನಲ್ಲಿ ಮೊಬೈಲ್ನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಸಮುದ್ರಪಾಲಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್ ಶೋಧ ಕಾರ್ಯಕ್ಕೆ ಕ್ರಮ ಕೈಗೊಂಡರು. ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಈಜು ಪರಿಣಿತರು ಶೋಧ ನಡೆಸಿದರೂ ಪ್ರಯೋಜನವಾಗಿಲ್ಲ. ಸಂಜೆ ಭಾರಿ ಗಾಳಿ, ಮಳೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.