ವಿಜಯಪುರ: ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತಿದ್ದ ಕುರಿಗಳ ಮೇಲೆ ಹರಿದು ರೈಲು ಹರಿದ ಪರಿಣಾಮ 40 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಕೂಡಗಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗಾಗಿ ಸೇತುವೆ ಕೆಳಗಿದ್ದ ರೈಲ್ವೇ ಹಳಿ ಮೇಲೆ ನಿಂತಿದ್ದವು.
ಭಾರೀ ಮಳೆಯಾಗುತ್ತಿದ್ದರಿಂದ ಕುರಿಗಳು ಅಲ್ಲೇ ಇದ್ದ ಸೇತುವೆಯತ್ತ ಬಂದಿವೆ. ಇದೇ ವೇಳೆ ರೈಲು ಬಂದಿದ್ದು, ನಿಂತಿದ್ದ ಕುರಿಗಳ ಮೇಲೆ ಹರಿದಿದೆ. ದುರದೃಷ್ಟವಶಾತ್ ಹಳಿ ಮೇಲೆ ನಿಂತಿದ್ದ ಎಲ್ಲಾ ಕುರಿಗಳು ರೈಲಿಗೆ ಸಾವನ್ನಪ್ಪಿವೆ. ಸದ್ಯ ಕುರಿಗಳ ಸಾವಿನಿಂದ ಕಂಗೆಟ್ಟಿರುವ ಕುರಿಗಾಹಿಗಳು ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ವಿದೇಶದಿಂದ ಐಷಾರಾಮಿ ಕಾರು ಖರೀದಿ: ಮದ್ರಾಸ್ ಹೈಕೋರ್ಟ್ನಿಂದ ನಟ ವಿಜಯ್ಗೆ ಬಿಗ್ ರಿಲೀಫ್
ಜಿಲ್ಲಾಧಿಕಾರಿ ಈಗ ಹಳ್ಳಿಮೇಷ್ಟ್ರು ..!ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿ,ಜನರ ಸಮಸ್ಯೆ ಆಲಿಸಿದ ಡಿಸಿ