More

    ಮಲಗಿದ್ದ ತಂದೆಯ ತಲೆ‌ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಮಗ

    ವಿಜಯಪುರ: ಬುದ್ಧಿ ಹೇಳಿದ ಕಾರಣಕ್ಕೆ ತಂದೆ ಮೇಲೆ ಕೋಪಗೊಂಡ ಮಗ, ಮಲಗಿದ್ದ ವೇಳೆ ತಂದೆಯ ತಲೆ‌ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿರುವ ಘಟನೆ ವಿಜಯಪುರದ ವೆಂಕಟೇಶ್ವರ ನಗರದಲ್ಲಿ ನಡೆದಿದೆ.

    ಇದನ್ನೂ ಓದಿ:  ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…

    ರಮೇಶ್​​ ಕೂಡಿಗನೂರ (60) ಹತ್ಯೆಯಾಗಿರುವ ದುರ್ದೈವಿ. ಪುತ್ರ ಅಮೀತ್ ಕೂಡಿಗನೂರ ಹತ್ಯೆಗೈದಿರುವ ಆರೋಪಿ. ತಂದೆಯನ್ನ ಕೊಂದ ಯುವಕ ಬಿಇ(ಇಂಜಿನಿಯರಿಂಗ್) ಪದವಿಧರ ಆಗಿದ್ದಾನೆ.

    ಇದನ್ನೂ ಓದಿ: ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು
    ಮಾದಕ ವ್ಯಸನಿಯಾಗಿದ್ದ ಅಮೀತ್​ಗೆ ದುಷ್ಚಟದಿಂದ ದೂರವಿರು ಎಂದು ರಮೇಶ್​​ ಬುದ್ದಿ ಹೇಳಿದ್ದರು. ಈ ವಿಚಾರವಾಗಿ ತಂದೆ-ಮಗನ ಮಧ್ಯೆ ಜಗಳವಾಗಿದೆ. ಕೋಪಗೊಂಡ ಮಗ ತಂದೆಯನ್ನೇ ಕೊಲೆ ಮಾಡಬೇಕು ಎಂದು ಸ್ಕೇಚ್​​ ಹಾಕಿದ್ದಾನೆ.

    ಮನೆಯಲ್ಲಿ ರಮೇಶ್​​ ಮಲಗಿದ್ದ ವೇಳೆ ತಲೆ‌ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಅಮೀತ್ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹನುಮಾನ್ ಚಾಲೀಸಾ ಪಠಿಸಿದ ಕಳ್ಳ 10 ರೂ.ಕಾಣಿಕೆ ನೀಡಿ ದೇವಸ್ಥಾನದಿಂದ 5000 ರೂ. ದೋಚಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts