ಕೆ.ಆರ್.ಪೇಟೆ: ಮುಂಬೈನಿಂದ ಬಂದು ಕ್ವಾರಂಟೈನ್ನಲ್ಲಿರುವ ಜನರಿಗೆ ಊಟ ಕೊಟ್ಟರೆ ಅದು ಚೆನ್ನಾಗಿಲ್ಲ ಎಂಬ ನೆಪದಲ್ಲಿ ಮನಸೋ ಇಚ್ಛೆ ಎಲ್ಲೆಂದರಲ್ಲಿ ಬಿಸಾಡಿ ಉದ್ಧಟತನ ತೋರಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಟ್ಟಣದ ಬಂಡಿಹೊಳೆ ವೃತ್ತದ ಗ್ರಾಮ ಭಾರತಿ ವಿದ್ಯಾಸಂಸ್ಥೆಯಲ್ಲಿ ತಾಲೂಕು ಆಡಳಿತ ಕ್ವಾರಂಟೈನ್ ಮಾಡಿರುವ ಜನರು ಮಾಡಿರುವ ಕೃತ್ಯ ಇದು. ತಮಗೆ ನೀಡಿದ ಅನ್ನ, ಸಾಂಬಾರು, ಚಪಾತಿ, ಮುದ್ದೆ, ಮೊಟ್ಟೆ ಒಳಗೊಂಡ ಆಹಾರ ಪದಾರ್ಥಗಳನ್ನು ಹೊರಗೆ ಎಸೆದಿದ್ದಾರೆ. ಕೆಲವರು ಊಟದ ಪಾರ್ಸಲ್ ಅನ್ನು ತೆರೆಯದೇ ಬಿಸಾಡಿದ್ದಾರೆ! ಜತೆಗೆ ಟೀ, ಕಾಫಿ ಕುಡಿದು ಖಾಲಿ ಲೋಟಗಳನ್ನೂ ಅಲ್ಲಲ್ಲೇ ಎಸೆದಿದ್ದಾರೆ. ಸಂಸ್ಥೆಯ ಕಟ್ಟಡದ ಮೇಲೆಲ್ಲ ಊಟದ ಪಾರ್ಸಲ್ನ ಕವರ್, ಉಳಿದಿರುವ ಅನ್ನ ಚೆಲ್ಲಾಡಿರುವುದು ಕಂಡುಬಂದಿದೆ.
ಇದನ್ನೂ ಓದಿರಿ ತಾಯಿಯ ಶವದ ಜತೆಯಲ್ಲೇ 5 ದಿನ ಇದ್ದ ಮಗಳು!
ಊಟ ಬಿಸಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಎಂ. ಶಿವಮೂರ್ತಿ, ‘‘ಕ್ವಾರಂಟೈನ್ನಲ್ಲಿ ಇರುವವರು ಮನೆಯಿಂದ ಊಟ ತರಿಸಿಕೊಳ್ಳಲು ಬಯಸಿದ್ದರು. ಇದಕ್ಕೆ ಒಪ್ಪದೇ ಇದ್ದುದರಿಂದ ಈ ರೀತಿ ಮಾಡಿದ್ದಾರೆ. ಅಷ್ಟೇ ಅಲ್ಲ, ಕ್ವಾರಂಟೈನ್ನಲ್ಲಿರುವ ಕೆಲವರು ಮದ್ಯ ತರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನು ತಾಲೂಕು ಆಡಳಿತ ತಡೆದಿದೆ’’ ಎಂದು ವಿವರಿಸಿದ್ದಾರೆ.
ಇದನ್ನೂ ಓದಿರಿ ಬಾಲಿವುಡ್ ನಟನಿಗೆ ವಾಟ್ಸ್ಆ್ಯಪ್ನಲ್ಲಿ ಬಂತು ಡಿವೋರ್ಸ್ ನೋಟಿಸ್ !
ಕ್ವಾರಂಟೈನ್ನಲ್ಲಿರೋರು ಊಟ ಬಿಸಾಡಿದ್ರು!
ಕೆ.ಆರ್.ಪೇಟೆ ಪಟ್ಟಣದ ಬಂಡಿಹೊಳೆ ವೃತ್ತದ ಗ್ರಾಮ ಭಾರತಿ ವಿದ್ಯಾಸಂಸ್ಥೆಯಲ್ಲಿ ಮುಂಬೈನಿಂದ ಬಂದು ಕ್ವಾರಂಟೈನ್ನಲ್ಲಿರುವ ಹಲವರು ಊಟವನ್ನು ಎಲ್ಲೆಂದರಲ್ಲಿ ಬಿಸಾಡಿ ಉದ್ಧಟತನ ತೋರಿದ್ದಾರೆ. ಮನೆ ಊಟ ತರಿಸಿಕೊಳ್ಳಲು ಈ ಕೃತ್ಯವೆಸಗಿದ್ದಾರೆಂದು ತಹಸೀಲ್ದಾರ್ ಹೇಳಿದ್ದಾರೆ. #Mumbai #KRPate #Lunch #Quarantine #Viral
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮೇ 19, 2020