More

    ಕುವೆಂಪುನಗರ ನಿವಾಸಿಗಳ ಬದುಕು ಹಬ್ಬ

    ಶಿವಮೊಗ್ಗ: ಕುವೆಂಪುನಗರದ ಬದುಕು ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬದುಕು ಹಬ್ಬದ ನಿಮಿತ್ತ ಭಾನುವಾರ ಇಡೀ ದಿನ ಗಾಳಿಪಟ ಉತ್ಸವ, ಕ್ರೀಡೋತ್ಸವ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಸ್ಥಳೀಯರನ್ನು ರಂಗೇರಿಸಿದವು.
    ಕುವೆಂಪುನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಹಿರಿಯ, ಕಿರಿಯ ಮಕ್ಕಳು, ಮಹಿಳೆಯರು ಹಲವು ಕ್ರೀಡೆಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಗಾಳಿಪಟ ಉತ್ಸವದಲ್ಲಿ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು.
    ರಾತ್ರಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಬಡಾವಣೆಯಲ್ಲಿರುವ ಸಂಘಗಳಲ್ಲಿ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವುದೇ ವಿಶೇಷ. ಅದರಿಂದ ನಿವಾಸಿಗಳ ನಡುವೆ ಪರಸ್ಪರ ಸ್ನೇಹ ವಿಶ್ವಾಸ ಹೆಚ್ಚಾಗಿ, ಸಹಬಾಳ್ವೆ ನಡೆಸಲು ಸಹಕಾರಿಯಾಗುತ್ತದೆ. ಹಾಗೆಯೇ ಸರ್ಕಾರದಿಂದ ಬಡಾವಣೆಗೆ ಅವಶ್ಯಕತೆ ಇರುವ ಮೂಲಸೌಕರ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.
    ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ, ಗೌರವಾಧ್ಯಕ್ಷ ರಮೇಶ್ ಬಾಬು, ಉಪಾಧ್ಯಕ್ಷ ವೇದಾನಂದ್, ಕಾರ್ಯದರ್ಶಿ ರಾಜಪ್ರಕಾಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts