ಭಾರತದಲ್ಲಿ ಹಿಂದಿ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ಸೃಷ್ಟಿಸಿರುವ ಕ್ರೇಜ್, ಮುರಿದಿರುವ ದಾಖಲೆಗಳು ಅಷ್ಟಿಷ್ಟಲ್ಲ. ಹೌದು, ಗಲ್ಲಾಪೆಟ್ಟಿಗೆಯನ್ನು ಉಕ್ಕಿ ಹರಿಯುವಂತೆ ಮಾಡುತ್ತಿರುವ ಈ ಸಿನಿಮಾ ಇಲ್ಲಿಯವರೆಗೆ ಬರೋಬ್ಬರಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇಡೀ ದೇಶದ ಹಾಗೂ ವಿದೇಶಗಳಲ್ಲಿನ ಸಿನಿಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಹೀಗಿದ್ದರೂ, ಈ ಸಿನಿಮಾದಲ್ಲಿ ತೋರಿಸಲಾದ ಹಲವು ವಿಷಯಗಳ ಬಗ್ಗೆ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ. ಕಾಶ್ಮೀರ್ ಪಂಡಿತರ ಹತ್ಯೆ, ವಲಸೆಯ ಬಗ್ಗೆ ಕಥೆ ಹೊಂದಿರುವ ಈ ಸಿನಿಮಾ ಬಹುತೇಕ ಎಲ್ಲಾ ಬಿಜೆಪಿ ರಾಜಕಾರಣಿಗಳ ಹಾಗೂ ಹಿಂದೂಗಳ ಮನಗೆದ್ದಿದೆ.
‘ದಿ ಕಾಶ್ಮಿರ್ ಫೈಲ್ಸ್’ ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಪರಿಪರಿಯಾಗಿ ಹೊಗಳುತ್ತಿದ್ದಾರೆ. ನಿರ್ದೇಶಕ ವಿವೇಕ್ ಅವರನ್ನು ಸಿನಿಮಾ ನೋಡಿದ ಬಳಿಕ ಕಾಲಿಗೆ ಬಿದ್ದು ನಮಸ್ಕರಿಸಿದ ಮಹಿಳೆಯೊಬ್ಬರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುತ್ತಾ ಪ್ರೇಕ್ಷಕರು ಬಿಕ್ಕಿ-ಬಿಕ್ಕಿ ಅಳುತ್ತಿದ್ದ ದೃಶ್ಯಗಳು ಕೂಡಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು, ಹಲವು ಸೆಲೆಬ್ರಿಟಿಗಳು ಕೂಡಾ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಹಾಗೆಯೇ, ಪ್ರೇಕ್ಷಕರ ಭಾವನೆಯ ಮೇಲೆ ಈ ಸಿನಿಮಾ ಹಲವು ವಿಧಗಳಲ್ಲಿ ಪ್ರಭಾವ ಬೀರಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತಿವೆ. ಹೌದು, ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಮಹಿಳೆಯೊಬ್ಬರು ತಮ್ಮ ರಕ್ತದಿಂದ ಈ ಸಿನಿಮಾ ಪೋಸ್ಟರ್ ಅನ್ನು ಬಿಡಿಸಿದ್ದಾರೆ. ಸದ್ಯ, ಪೋಸ್ಟರ್ ಬಿಡಿಸಿರುವ ಈ ಮಹಿಳೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಂದಹಾಗೆ, ಪೋಸ್ಟರ್ ರಚಿಸಿದ ಮಹಿಳೆಯ ಹೆಸರು ಮಂಜೂ ಸೋನಿ. ಮಂಜೂ ಅವರು ತಮ್ಮ ದೇಹದಿಂದ 10 ಎಂಎಲ್ ರಕ್ತವನ್ನು ತೆಗೆದು, ಅದನ್ನು ಬಳಸಿ ‘ದಿ ಕಾಶ್ಮಿರ್ ಫೈಲ್ಸ್’ ಸಿನಿಮಾ ಪೋಸ್ಟರ್ ಅನ್ನು ಬಿಡಿಸಿದ್ದಾರೆ.
ಹೀಗೆ, ಪೋಸ್ಟರ್ ಬಿಡಿಸಿದ ಮಹಿಳೆಯ ಫೋಟೋಗಳು ವೈರಲ್ ಆದ ಬಳಿಕ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಸಹ ಈ ಪರಿಯ ಪ್ರೀತಿ ಕಂಡು ಒಂದು ಕಡೆ ಶಾಕ್ ಆಗಿ ಮತ್ತೊಂದು ಕಡೆ ಆ ಮಹಿಳೆಯನ್ನು ಹೊಗಳಿದ್ದಾರೆ. ”ಓಹ್ ಮೈ ಗಾಡ್… ಇದನ್ನು ನಂಬಲು ಸಾಧ್ಯವಿಲ್ಲ. ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಮಂಜೂ ಅವರಿಗೆ ನಾನು ಹೇಗೆ ಧನ್ಯವಾದ ತಿಳಿಸಬೇಕು ಅಂತ ಗೊತ್ತಿಲ್ಲ. ಅವರಿಗೆ ನನ್ನ ಶತ ಶತ ಪ್ರಣಾಮಗಳು, ಕೃತಜ್ಞತೆಗಳು. ಅವರ ಪರಿಚಯ ನಿಮಗೆ ಯಾರಿಗಾದರೂ ಇದ್ದರೆ ನನಗೆ ಅವರ ನಂಬರ್ ಮೆಸೇಜ್ ಮಾಡಿ” ಎಂದು ವಿವೇಕ್ ಅಗ್ನಿಹೋತ್ರಿ ಮೊದಲು ಟ್ವೀಟ್ ಮಾಡಿದ್ದಾರೆ.
ಆದರೆ, ಮಹಿಳೆ ಮಾಡಿರುವುದು ಸರಿಯಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಅವರಿಗೆ ಅನಿಸಿದೆ. ಹಾಗಾಗಿ, ‘ನಿಮ್ಮ ಭಾವನೆಗಳನ್ನು ನಾನು ಮೆಚ್ಚುತ್ತೇನೆ. ಆದರೂ ಕೂಡಾ ಈ ರೀತಿಯ ಕೆಲಸವನ್ನು ಯಾರೂ ಪ್ರಯತ್ನಿಸಬಾರದು ಎಂದು ಗಂಭೀರವಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದು ಒಳ್ಳೆಯದು ಅಲ್ಲವೇ ಅಲ್ಲ. ಮನೆಯಲ್ಲಿ ಇಂಥದ್ದನೆಲ್ಲ ಮಾಡಲೇಬೇಡಿ” ಎಂದು ಮತ್ತೆ ಟ್ವೀಟ್ ಮಾಡಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.
OMG. Unbelievable. I don’t know what to say… how to thank Manju Soni ji. @manjusoni Shat shat pranam. Gratitude.
If anyone knows her, pl share her contacts with me in DM. #RightToJustice pic.twitter.com/1jxsLDhCXq
— Vivek Ranjan Agnihotri (@vivekagnihotri) March 24, 2022
Though I appreciate feelings but I very seriously request people not to try anything like this. This is not good at all. https://t.co/nCt3aFAqio
— Vivek Ranjan Agnihotri (@vivekagnihotri) March 24, 2022
ಆರ್ಆರ್ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!
ಯಾವುದೇ ಭಾಷೆ ಸಿನಿಮಾ, ಒಂದೇ ಟಿಕೆಟ್ ಬೆಲೆ! ಆಂಧ್ರ ಮಾದರಿ ಕರುನಾಡಲ್ಲಿ ಬೇಕೆ?