ವಿಜಯಪುರ: ಇಂದು ವಿಜಯಪುರ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಆವರಣಕ್ಕೆ ನರಿಯೊಂದು ಆಗಮಿಸಿ ಅಚ್ಚರಿ ಮೂಡಿಸಿತು.
ಆವರಣಕ್ಕೆ ಬಂದು ಏನು ಮಾಡಬೇಕು ಎಂದು ತಿಳಿಯದೆ ಓಡುತ್ತಿದ್ದ ನರಿಯನ್ನು ನೋಡಿ ನ್ಯಾಯಾಲಯದಲ್ಲಿದ್ದ ವಕೀಲರು, ಜನರು ಆಶ್ಚರ್ಯ ವ್ಯಕ್ತಪಡಿಸಿದರು.
ಬಳಿಕ ಪ್ರಾಣಿ ರಕ್ಷಕ ಕಲ್ಮೇಶ್ ಆಳೂರು ಅವರು ನರಿಯನ್ನು ಬಲೆ ಹಾಕಿ ಹಿಡಿದು ಅರಣ್ಯಾಧಿಕಾರಿಗಳ ಸುಪರ್ದಿಗೆ ನೀಡಿದರು. ಅಧಿಕಾರಿಗಳು ನರಿಯನ್ನು ಡೋಣಿ ನದಿಯ ತಟದಲ್ಲಿ ಬಿಟ್ಟು ಬಂದರು.