More

    ಹೊಲದಲ್ಲಿ ಕಾಲುವೆ ಮುಚ್ಚಿದ್ರು… ಗುದ್ದಲಿ ಹಿಡಿದೇ ಫೈಟ್​ ಮಾಡಿದ್ರು..!

    ಹಾವೇರಿ: ಕೃಷಿ ಜಮೀನಿನ ರಸ್ತೆ ವಿವಾದ ಕೋರ್ಟ್​ನಲ್ಲಿದ್ದರೂ ಅಕ್ಕಪಕ್ಕದ ರೈತರು ಸೋಮವಾರ ಹೊಲದಲ್ಲೇ ಬಡಿದಾಡಿಕೊಂಡಿದ್ದಾರೆ.

    ಹಾನಗಲ್​ ತಾಲೂಕಿನ ದೇವರಹೊಸಪೇಟೆ ಗ್ರಾಮದ ಜಮೀನೊಂದರಲ್ಲಿ ರಸ್ತೆ ಇದೆ -ಇಲ್ಲ ಎಂಬ ವಿಚಾರವಾಗಿ ಸುಮಾರು 25 ಜನರ ನಡುವೆ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಗುದ್ದಲಿ ಹಿಡಿದುಕೊಂಡೇ ಜಗಳಕ್ಕೆ ನಿಂತರು. ಈ ಮಾರಾಮಾರಿಯ ವಿಡಿಯೋ ವೈರಲ್​ ಆಗಿದೆ.

    ಇದನ್ನೂ ಓದಿರಿ ಕಾಂಗ್ರೆಸ್​ ಸಭೆಯಲ್ಲಿ ನಡೆದೇ ಹೋಯ್ತು ಮಾರಾಮಾರಿ.. ವಿಡಿಯೋ ವೈರಲ್​!

    ರೈತ ಯಲ್ಲಪ್ಪ ಕೋತಂಬರಿ ಮತ್ತು ಕುಟುಂಬಸ್ಥರ ಮೇಲೆ ಸುರೇಶ್ ಮಹಾರಾಜಪೇಟ, ರಾಮಪ್ಪ, ಮಹದೇವ, ಸಿದ್ದಲಿಂಗೇಶ, ನೀಲಪ್ಪ ಮತ್ತು ಬಸವನಣ್ಣೆ ಅವರಿದ್ದ ಗುಂಪು ಹಲ್ಲೆ ಮಾಡಿದೆ. ಗಾಯಗೊಂಡ ಯಲ್ಲಪ್ಪ ಕೋತಂಬರಿ ಅವರನ್ನು ಹಾನಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಯಲ್ಲಪ್ಪನನ್ನು ನೆಲದ ಮೇಲೆ ಕೆಡವಿ ರೈತರು ಹೊಡೆಯುತ್ತಿರುವ ಮತ್ತು ವಿವಾದಿತ ಪ್ರದೇಶದಲ್ಲಿ ನೀರು ಹರಿಯುತ್ತಿದ್ದ ಕಾಲುವೆ ಮುಚ್ಚುತ್ತಿರುವ ದೃಶ್ಯ ವೈರಲ್​ ಆಗಿದೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ವಿವಾದ ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ.

    ರೈತರ ಬಡಿದಾಟದ ವಿಡಿಯೋ ವೈರಲ್​!

    ರೈತರ ಬಡಿದಾಟದ ವಿಡಿಯೋ ವೈರಲ್​!ಗುದ್ದಲಿ ಸಮೇತ ಕೃಷಿ ಜಮೀನಿಗೆ ಬಂದ ರೈತರ ಗುಂಪು ರಸ್ತೆ ವಿಚಾರವಾಗಿ ಹೇಗೆ ಫೈಟ್​ ನಡೆಸುತ್ತೆ ನೋಡಿ… ಹಾನಗಲ್​ ತಾಲೂಕಿನ ದೇವರಹೊಸಪೇಟೆ ಗ್ರಾಮದಲ್ಲಿ ಇಂದು(ಸೋಮವಾರ) ಬೆಳಗ್ಗೆ ರೈತ ಯಲ್ಲಪ್ಪ ಕೋತಂಬರಿ ಅವರನ್ನು ನೆಲದ ಮೇಲೆ ಕೆಡವಿ ಹೊಡೆಯುತ್ತಿರುವ ಮತ್ತು ವಿವಾದಿತ ಪ್ರದೇಶದಲ್ಲಿ ನೀರು ಹರಿಯುತ್ತಿದ್ದ ಕಾಲುವೆಯನ್ನು ಮುಚ್ಚುತ್ತಿರುವ ದೃಶ್ಯ ವೈರಲ್​ ಆಗಿದೆ. ಹೆಚ್ಚಿನ ಮಾಹಿತಿಗೆ ಇದನ್ನೂ ಕ್ಲಿಕ್​ ಮಾಡಿ #Haveri #Road #Court #Broke #Hanagal #Farmers

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜೂನ್ 1, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts