More

    ದಿ.ಅಂಗಡಿ ಕುಟುಂಬದೊಂದಿಗೆ ಪಕ್ಷ ನಿಲ್ಲಲಿದೆ – ನಳಿನ್‌ಕುಮಾರ ಕಟೀಲ್

    ಬೆಳಗಾವಿ: ಮುಂಬೈ ಕರ್ನಾಟಕ ಭಾಗದಲ್ಲಿ ಪ್ರಭಾವಶಾಲಿ ನಾಯಕರಾಗಿದ್ದ ದಿ.ಸುರೇಶ ಅಂಗಡಿ ಅವರು ಪಕ್ಷವನ್ನು ಕಟ್ಟಿ ಬೆಳಸಿದವರು. ಪಕ್ಷ ನಿಷ್ಠೆ, ಸಿದ್ಧಾಂತವನ್ನು ಅವರಿಂದ ಕಲಿಯಬೇಕು. ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡರು. ಅತಿ ಹೆಚ್ಚು ಅನುದಾನವನ್ನೂ ರಾಜ್ಯಕ್ಕೆ ತಂದಿದ್ದಾರೆ. ರಾಜ್ಯದಲ್ಲಿ ಬಾಕಿ ಉಳಿದ ಅನೇಕ ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಿದ್ದರು.

    ಯುವ ರಾಜಕಾರಣಿಗಳಿಗೆ ಸುರೇಶ ಅಂಗಡಿ ಅವರು ಮಾದರಿ ನಾಯಕರಾಗಿದ್ದರು. ದಿ.ಸುರೇಶ ಅಂಗಡಿ ಅವರ ಕುಟುಂಬದ ಜತೆ ಇಡೀ ಪಕ್ಷ ನಿಲ್ಲಲಿದೆ ಎಂದು ನಳಿನ್‌ಕುಮಾರ ಕಟೀಲ್ ಹೇಳಿದರು.

    ದಿ.ಸುರೇಶ ಅಂಗಡಿ ಅವರು ಮಾರ್ಗದರ್ಶಕರಾಗಿ ಹಿರಿಯ ಅಣ್ಣನಂತಿದ್ದರು. ಅವರು ನಿಧನರಾದಾಗ ನಾನು ಹೋಂ ಕ್ವಾರಂಟೈನ್‌ನಲ್ಲಿದ್ದೆ. ಹೀಗಾಗಿ ಅಂದು ಬರಲು ಆಗಿರಲಿಲ್ಲ. ಸುರೇಶ ಅಂಗಡಿ ಸ್ಮಾರಕ ಮತ್ತು ಬೆಳಗಾವಿ-ಯಶವಂತಪುರ ರೈಲ್‌ಗೆ ಅವರ ಹೆಸರು ಇಡುವ ವಿಚಾರ ಸರ್ಕಾರದ ಮುಂದೆ ಇದ್ದು, ಪರಿಶೀಲನೆ ನಡೆದಿದೆ.
    |ನಳಿನ್‌ಕುಮಾರ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts