More

    ಶ್ರೀಮಂತರ ಅತಿಕ್ರಮಣವನ್ನು ಬುಲ್ಡೋಜರ್ ತಂದು ಕೆಡವಿ, ಬಡವರದ್ದಲ್ಲ ಅಂದ್ರು ಎಚ್.​ಡಿ.ಕೆ.

    ಮೈಸೂರು: ಬೆಂಗಳೂರಿನಲ್ಲಿ ಯಾರು ಎಷ್ಟು ಅತಿಕ್ರಮಣ ಮಾಡಿಕೊಂಡಿದ್ದಾರೆ ಅನ್ನುವ ಪಟ್ಟಿಯನ್ನು ದಾಖಲೆ ಸಮೇತ ಕೊಡ್ತೀನಿ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

    ಮೈಸೂರಿನಲ್ಲಿ ಬುಧವಾರ ಮಾತನಾಡಿದ ಅವರು, ಬಡವರ ಮೇಲೆ ಮಾತ್ರ ಅಧಿಕಾರಿಗಳು ಪ್ರತಾಪ ತೋರುತ್ತಾರೆ, ಶ್ರೀಮಂತರ ಮೇಲಲ್ಲ. ಬಡವರ ಆಸ್ತಿಯನ್ನು ಬುಲ್ಡೋಜರ್​ನಿಂದ ಒಡೆದು ಹಾಕಿ ಏನು ಮಾಡುತ್ತೀರಿ ಎಂದು ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಯಾರೋ ಬಡವ ಫುಟ್ಪಾತ್ ಮೇಲೆ ಅಂಗಡಿ ಇಟ್ಟುಕೊಂಡಿರುತ್ತಾನೆ. ನಮ್ಮ ಅಧಿಕಾರಿಗಳು ಅದನ್ನು ಜೆಸಿಬಿ ತಂದು ಹೊಡೆದು ಹಾಕ್ತಾರೆ. ಅದೇ ಶ್ರೀಮಂತರು ಎಷ್ಟೇ ಅಕ್ರಮ ಮಾಡಿದ್ದರೂ ಕ್ರಮ ವಹಿಸಲ್ಲ. ಇದು ನಿಮ್ಮ ಸರ್ಕಾರದ ನಡೆಯೇ ಎಂದು ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲಿ ಯಾರು ಎಷ್ಟು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂಬ ಪಟ್ಟಿಯನ್ನು ದಾಖಲೆ ಸಮೇತ ನೀಡುತ್ತೇನೆ. ಅಂತಹವರ ಆಸ್ತಿಯನ್ನು ಬುಲ್ಡೋಜರ್​ ನಿಂದ ಕೆಡವಲು ಸಾಧ್ಯವಾಗುತ್ತಾ ಎಂದು ಸವಾಲು ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಲವು ಅವಕಾಶವಿದೆ. ನಿಜವಾಗಲೂ ಆಸಕ್ತಿ ಇದ್ದರೆ ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಬಿಜೆಪಿಯವರು ಕೋಮು ಸೌಹಾರ್ದಕ್ಕೆ ಬೆಂಕಿ ಹಚ್ಚುತ್ತಿದ್ದಾರೆ, ಕಾಂಗ್ರೆಸ್‌ನವರು ಪೆಟ್ರೋಲ್ ಸುರಿಯುತ್ತಿದ್ದಾರೆ.ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಎರಡೂ ಪಕ್ಷಗಳು ಜಂಟಿಯಾಗಿಯೇ ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts