ನವದೆಹಲಿ: ಕರೊನಾ ಪಿಡುಗು ಹಾಗೂ ಅದರ ಮುಂದುವರಿದ ಹಾವಳಿಯಿಂದಾಗಿ ಬಡತನದ ವಿರುದ್ಧದ ಹೋರಾಟ ಆಪತ್ತಿನಲ್ಲಿದೆ ಎಂಬುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವ ಬ್ಯಾಂಕ್ ಅಭಿವೃದ್ಧಿ ಸಮಿತಿಯ ಅಧಿವೇಶನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿರುವ ನಿರ್ಮಲಾ ಸೀತಾರಾಮನ್, ‘ನೇಬರ್ಹುಡ್ ಫಸ್ಟ್’ ಪಾಲಿಸಿ ಪ್ರಕಾರ ದಕ್ಷಿಣಾ ಏಷ್ಯಾ ಭಾಗದಲ್ಲಿ ಪ್ರಮುಖ ಪಾತ್ರ ವಹಿಸಲು ಹಾಗೂ ತನ್ನ ಅನುಭವ ಹಂಚಿಕೊಳ್ಳಲು ಭಾರತ ಸಿದ್ಧವಿದೆ ಎಂಬುದಾಗಿ ಅವರು ಹೇಳಿದ್ದಾರೆ.
ನಾವು ಕಳೆದ ಸಲ ಏಪ್ರಿಲ್ನಲ್ಲಿ ಸಭೆ ಸೇರಿದ್ದಾಗ ಹಾವಳಿ ಇಟ್ಟಿರುವ ಕರೊನಾ ಇನ್ನೂ ಮುಂದುವರಿದಿದ್ದು, ಮುಂದುವರಿದ ಹಾಗೂ ಮುಂದುವರಿಯುತ್ತಿರುವ ರಾಷ್ಟ್ರಗಳನ್ನೂ ಇದು ಬಾಧಿಸಿದೆ. ಅಲ್ಲದೆ ಬಡತನದ ಮಟ್ಟ ತಗ್ಗಿಸುವಲ್ಲಿ ವರ್ಷಗಳ ಕಾಲ ನಡೆಸಿದ ಪ್ರಯತ್ನ ದೊಡ್ಡ ನಷ್ಟಕ್ಕೀಡಾಗುವ ಆಪತ್ತಿನಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)