More

    ಬಡತನದ ವಿರುದ್ಧದ ಹೋರಾಟದ ಫಲ ರಿಸ್ಕ್​​ನಲ್ಲಿದೆ: ಸಚಿವೆ ನಿರ್ಮಲಾ ಸೀತಾರಾಮನ್​ ಕಳವಳ

    ನವದೆಹಲಿ: ಕರೊನಾ ಪಿಡುಗು ಹಾಗೂ ಅದರ ಮುಂದುವರಿದ ಹಾವಳಿಯಿಂದಾಗಿ ಬಡತನದ ವಿರುದ್ಧದ ಹೋರಾಟ ಆಪತ್ತಿನಲ್ಲಿದೆ ಎಂಬುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕಳವಳ ವ್ಯಕ್ತಪಡಿಸಿದ್ದಾರೆ.

    ವಿಶ್ವ ಬ್ಯಾಂಕ್​ ಅಭಿವೃದ್ಧಿ ಸಮಿತಿಯ ಅಧಿವೇಶನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿರುವ ನಿರ್ಮಲಾ ಸೀತಾರಾಮನ್​, ‘ನೇಬರ್​ಹುಡ್​ ಫಸ್ಟ್​’ ಪಾಲಿಸಿ ಪ್ರಕಾರ ದಕ್ಷಿಣಾ ಏಷ್ಯಾ ಭಾಗದಲ್ಲಿ ಪ್ರಮುಖ ಪಾತ್ರ ವಹಿಸಲು ಹಾಗೂ ತನ್ನ ಅನುಭವ ಹಂಚಿಕೊಳ್ಳಲು ಭಾರತ ಸಿದ್ಧವಿದೆ ಎಂಬುದಾಗಿ ಅವರು ಹೇಳಿದ್ದಾರೆ.

    ನಾವು ಕಳೆದ ಸಲ ಏಪ್ರಿಲ್​ನಲ್ಲಿ ಸಭೆ ಸೇರಿದ್ದಾಗ ಹಾವಳಿ ಇಟ್ಟಿರುವ ಕರೊನಾ ಇನ್ನೂ ಮುಂದುವರಿದಿದ್ದು, ಮುಂದುವರಿದ ಹಾಗೂ ಮುಂದುವರಿಯುತ್ತಿರುವ ರಾಷ್ಟ್ರಗಳನ್ನೂ ಇದು ಬಾಧಿಸಿದೆ. ಅಲ್ಲದೆ ಬಡತನದ ಮಟ್ಟ ತಗ್ಗಿಸುವಲ್ಲಿ ವರ್ಷಗಳ ಕಾಲ ನಡೆಸಿದ ಪ್ರಯತ್ನ ದೊಡ್ಡ ನಷ್ಟಕ್ಕೀಡಾಗುವ ಆಪತ್ತಿನಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts