More

    15ಕ್ಕೂ ಅಧಿಕ ಪ್ರಕರಣಗಳ ಕುಖ್ಯಾತ ಕಳ್ಳನ ಬಂಧನ

    ಕಾರ್ಕಳ: ಬೈಪಾಸ್ ರಸ್ತೆಯ ಹಾರ್ಡ್‌ವೇರ್ ಅಂಗಡಿಯಲ್ಲಿ ಹಾಡಹಗಲೇ 1.45 ಲಕ್ಷ ರೂ. ಕಳವುಗೈದ ಆರೋಪಿಗಳಲ್ಲಿ ಪೈಕಿ ಹಾಸನ ತಾಲೂಕಿನ ವಿಜಯನಗರದ ಮಹಮ್ಮದ್ ಇಕ್ಬಾಲ್(54) ಎಂಬಾತನನ್ನು ಕಾರ್ಕಳ ಪೊಲೀಸರು ಮಡಿಕೇರಿಯಲ್ಲಿ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಇಬ್ರಾಹಿಂ ಕಾರ್ಗಲ್ ತಲೆಮರೆಸಿಕೊಂಡಿದ್ದಾನೆ.

    ಜೂನ್ 2ರಂದು ಆರೋಪಿ ಮಹಮ್ಮದ್ ಇಕ್ಬಾಲ್ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾರ್ಗಲ್ ನಿವಾಸಿಗಳಾದ ತನ್ನ ಭಾವ ಇಬ್ರಾಹಿಂ ಹಾಗೂ ಮಾವ ನೂರ ಎಂಬುವರು ಜತೆ ಕಳವು ನಡೆಸಿದ್ದನು. ಪ್ರಕರಣದಲ್ಲಿ ಭಾಗಿಯಾದ್ದ ನೂರ ಎಂಬಾತನನ್ನು ಈಗಾಗಲೇ ಬಂಧಿಸಿದ್ದು, ಹಿರಿಯಡ್ಕ ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ.

    ಆರೋಪಿ ಮಹಮ್ಮದ್ ಇಕ್ಬಾಲ್ ಕುಖ್ಯಾತ ಕಳ್ಳನಾಗಿದ್ದು, ಈತನ ಮೇಲೆ ಉಡುಪಿ ಜಿಲ್ಲೆಯ ಕೋಟ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ, ಮಾರ್ಕೆಟ್, ಬನವಾಸಿ, ಹುಬ್ಬಳ್ಳಿ ಎಪಿಎಂಸಿ, ಕೊಡಗು ಜಿಲ್ಲೆಯ ಸೋಮವಾರ ಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಹಾಸನ ಜಿಲ್ಲೆಯ ಕೋಣನೂರು, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬಾಳೆಹೊನ್ನೂರು ಠಾಣೆ, ಮೈಸೂರು ನಗರ ದಕ್ಷಿಣ, ಚಿತ್ರದುರ್ಗ ಜಿಲ್ಲೆಯ ನಗರ ಠಾಣೆ, ಬೆಂಗಳೂರು ನಗರ ಚಿಕ್ಕಪೇಟೆ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ.

    ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹಾಕೆ ಅಕ್ಷಯ್ ಮಚೀಂದ್ರ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎಸ್.ಟಿ ಸಿದ್ಧಲಿಂಗಯ್ಯ ನಿರ್ದೇಶನದಂತೆ ಕಾರ್ಕಳ ಉಪವಿಭಾಗದ ಡಿವೈಎಸ್‌ಪಿ ವಿಜಯಪ್ರಸಾದ್, ಕಾರ್ಕಳ ಸರ್ಕಲ್ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್‌ಐ ಪ್ರಸನ್ನ ಕುಮಾರ್ ಮತ್ತು ತನಿಖಾ ಎಸ್‌ಐ ದಾಮೋದರ್, ಎಎಸ್‌ಐ ರಾಜೇಶ್ ಪಿ., ಪಿ.ಸಿ ಘನಶ್ಯಾಮ್, ಸಿದ್ಧರಾಯ, ರವೀಂದ್ರ ಮತ್ತು ಆನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts