More

    ಮಹಾಮಾರಿಯಿಂದ ರಕ್ಷಣೆಗೆ ‘ಕರೊನಾ ದೇವಿ’ ವಿಗ್ರಹ ಪ್ರತಿಷ್ಠಾಪನೆ

    ಕೊಯಮತ್ತೂರ್ : ವಿಶ್ವಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮನುಷ್ಯರನ್ನು ಬಲಿ ಪಡೆಯುತ್ತಿರುವ ಕರೊನಾ ಮಹಾಮಾರಿಯ ಹೊಡೆತದಿಂದ ಪಾರಾಗಲು, ಹಲವು ಧಾರ್ಮಿಕ ಆಚರಣೆಗಳಿಗೆ ಜನರು ಶರಣಾಗುತ್ತಿರುವುದು ಕಂಡುಬಂದಿದೆ. ಇದೀಗ ತಮಿಳುನಾಡಿನ ದೇವಾಲಯವೊಂದು ‘ಕರೊನಾ ದೇವಿ’ಯ ವಿಗ್ರಹವನ್ನು ಸ್ಥಾಪನೆ ಮಾಡಿ ಪೂಜೆ ಆರಂಭಿಸಿದೆ.

    ಕೊಯಮತ್ತೂರ್​​ನ ಕಾಮಾಚ್ಚಿಪುರಿ ಅಧೀನಂ ದೇವಸ್ಥಾನವು ಒಂದೂವರೆ ಅಡಿ ಎತ್ತರದ ಕಪ್ಪು ಗ್ರಾನೈಟ್​ನಲ್ಲಿ ನಿರ್ಮಿಸಿರುವ ‘ಕರೊನಾ ದೇವಿ’ ವಿಗ್ರಹವನ್ನು ಪ್ರತಿಷ್ಠಾಪಿಸಿದೆ. ನಿನ್ನೆಯಿಂದ ಈ ದೇವಿಗೆ ಪೂಜೆ ಸಲ್ಲಿಸಲು ಆರಂಭಿಸಿದೆ. ದೇವಾಲಯದ ಆಡಳಿತ ಮಂಡಳಿ ಈ ದೇವತೆಗೆ ವಿಶೇಷ ಪೂಜೆಗಳೊಂದಿಗೆ 48 ದಿನಗಳ ಮಹಾಯಾಗವನ್ನು ನಡೆಸಲು ಉದ್ದೇಶಿಸಿದ್ದು, ಇದರಿಂದ ಕರೊನಾ ನಿವಾರಣೆಯಾಗವುದೆಂದು ಆಶಿಸಿದ್ದಾರೆ.

    ಮಾರಕ ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಈ ರೀತಿ ದೇವತೆಗಳನ್ನು ಸೃಷ್ಟಿಸಿ ಅವರಿಗೆ ಪೂಜೆ ಮಾಡುವ ಪರಂಪರೆ ತಮಿಳುನಾಡಿಗೆ ಹೊಸದೇನಲ್ಲ. ಕೊಯಮತ್ತೂರಿನಲ್ಲಿ ಪ್ಲೇಗ್ ಮಾರಿಯಮ್ಮನ್ ದೇವಾಲಯ ಈಗಾಗಲೇ ಇದಕ್ಕೆ ಉದಾಹರಣೆಯಾಗಿದೆ ಎಂದು ದೇವಾಲಯದ ನಿರ್ವಾಹಕ ಆನಂದ ಭಾರತಿ ಹೇಳಿದ್ದಾರೆ.

    ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 34,875 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 16,99,225 ಜನರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ನಿನ್ನೆ 365 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿದ್ದು, ರಾಜ್ಯದಲ್ಲಿ ಒಟ್ಟು ಮೃತರ ಸಂಖ್ಯೆಯು 18,734ಕ್ಕೆ ಏರಿದೆ. (ಏಜೆನ್ಸೀಸ್)

    ಸ್ಯಾನಿಟೈಸರ್​ನಿಂದ ಮದ್ಯ ತಯಾರಿ ! ಆರು ಜನರ ಬಂಧನ

    ಲಸಿಕೆಯಿಂದ ಪ್ರಾಣರಕ್ಷಣೆ : ಅಪೋಲೋ ಜೆಎಂಡಿ ಡಾ. ಸಂಗೀತ ರೆಡ್ಡಿ

    ರಾಜಭವನದ ಮುಂದೆ ಕುರಿ ಮಂದೆ ಜೊತೆ ಪ್ರತಿಭಟನೆ; ನೋಡುತ್ತಾ ನಿಂತ ಪೊಲೀಸರು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts