ಪಟನಾ: ಬಿಹಾರದಲ್ಲಿ ಕರೊನಾ ಪ್ರಸರಣ ಪ್ರಮಾಣ ಹೆಚ್ಚುತ್ತಿದ್ದರೂ ಬಿಜೆಪಿ ಮತ್ತು ಜೆಡಿಯು ಪಕ್ಷಗಳ ಮುಖಂಡರು ಚುನಾವಣೆ ಬಗ್ಗೆಯೇ ಯೋಚಿಸುತ್ತಿವೆ ಎಂದು ರಾಷ್ಟ್ರೀಯ ಜನತಾ ದಳ್ (ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.
ಬಿಹಾರದಲ್ಲಿ ಕರೊನಾ ಸೋಂಕಿನ ಪರಿಸ್ಥಿತಿ ತುಂಬ ಕೆಟ್ಟದಾಗಿದೆ. ಇಲ್ಲಿ ಕೊವಿಡ್-19 ತಪಾಸಣಾ ದರ ಕಡಿಮೆ ಇದೆ. ರಾಜ್ಯದಲ್ಲಿ ದಿನಕ್ಕೆ ಕನಿಷ್ಠ 30,000 ಜನರನ್ನಾದರೂ ಟೆಸ್ಟ್ ಮಾಡಬೇಕು ಎಂದು ನಾವು ಒತ್ತಾಯಿಸುತ್ತಲೇ ಬಂದಿದ್ದೇವೆ. ಮಾರ್ಚ್ನಿಂದ ಮೇ ವರೆಗೆ ಇದ್ದ ಲಾಕ್ಡೌನ್ ಬಳಿಕ ಕರೊನಾ ವೈರಸ್ ಪ್ರಸರಣವಾಗುವ ಮತ್ತು ಸಾಯುವ ಸಂಖ್ಯೆಯೂ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ. ಇಷ್ಟೆಲ್ಲ ಆದರೂ ಬಿಜೆಪಿ ಮತ್ತು ಜೆಡಿಯುಗೆ ಚಿಂತೆಯೇ ಇಲ್ಲ. ಮುಂಬರುವ ಚುನಾವಣೆ ಬಗ್ಗೆಯೇ ಗಮನಹರಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಂದು ರಾತ್ರಿಯಿಂದಲೇ ಬೆಂಗಳೂರು ಸ್ತಬ್ಧ: ಲಾಕ್ ಡೌನ್ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ?
ಬಿಜೆಪಿ ಕಚೇರಿಯಲ್ಲಿ ಒಟ್ಟು 75 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿದೆ. ಮುಖ್ಯಮಂತ್ರಿ ನಿವಾಸ, ಉಪಮುಖ್ಯಮಂತ್ರಿ ಕಚೇರಿ, ಕಾರ್ಯದರ್ಶಿಗಳು ಎಲ್ಲರೂ ಕರೊನಾ ಭೀತಿಯಲ್ಲಿದ್ದಾರೆ. ಸಾಮಾನ್ಯ ಜನರಂತೂ ಸದಾ ಕರೊನಾ ವೈರಸ್ ಆತಂಕದಲ್ಲೇ ಇರುವಂತಾಗಿದೆ. ಹೀಗಿರುವಾಗ ಬಿಹಾರದಲ್ಲಿ ಚುನಾವಣೆ ನಡೆಸಲು ಹೇಗೆ ಸಾಧ್ಯ? ಅದರ ಮಧ್ಯೆ ಬಿಜೆಪಿ ವರ್ಚ್ಯುವಲ್ ರ್ಯಾಲಿ ನಡೆಸಿ ಕರೊನಾ ಹರಡಲು ಕಾರಣವಾಗುತ್ತಿದೆ. ಬಿಜೆಪಿ ಎಲ್ಲೆಲ್ಲೆ ವರ್ಚ್ಯುವಲ್ ರ್ಯಾಲಿ ಆಯೋಜಿಸಿತ್ತೋ ಅಲ್ಲೆಲ್ಲ ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇವರೆಲ್ಲ ಯಾವ ಜಮಾತ್ಗೆ ಸೇರಿದ ಜನರು? ಈ ಬಗ್ಗೆ ಬಿಜೆಪಿಯವರೇ ಹೇಳಬೇಕು ಎಂದು ಟೀಕಿಸಿದ್ದಾರೆ.
ಹಾಗೇ ರಾಜ್ಯದ ಆರೋಗ್ಯ ವ್ಯವಸ್ಥೆ ಸುಧಾರಣೆಯತ್ತ ಸರ್ಕಾರ ಗಮನಹರಿಸಬೇಕು ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಬಾಲಿವುಡ್ ನಟಿ ರೇಖಾ ಬಂಗಲೆಯಲ್ಲಿನ ಇನ್ನೂ ನಾಲ್ವರು ಗಾರ್ಡ್ಗಳಿಗೆ ಕರೊನಾ!