More

    ಟ್ರ್ಯಾಕ್ಟರ್​​ನಡಿ ಸಿಲುಕಿ ಬಾಲಕ ಮೃತ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಅಪ್ರಾಪ್ತ ವಯಸ್ಸಿನ ಚಾಲಕನ ಹತ್ಯೆ

    ರಾಂಚಿ: ಉದ್ರಿಕ್ತ ಜನರ ಗುಂಪೊಂದು ಅಪ್ರಾಪ್ತ ವಯಸ್ಸಿನ ಬಾಲಕನನ್ನು ನಿರ್ದಯವಾಗಿ ಥಳಿಸಿ ಕೊಲೆಗೈದಿರುವ ಘಟನೆ ಝಾರ್ಖಂಡ್​ನ ಲೋಹರ್​ದಗಾ ಬಳಿ ನಡೆದಿದೆ.

    ಇದನ್ನೂ ಓದಿ: ಯುವಕನ ತಲೆ ಬೋಳಿಸಿ, ಹಣ ದೋಚಿ ಆತನ ಮೇಲೆ ಮೂತ್ರ ವಿಸರ್ಜಿಸಿದ ತೃತಿಯಲಿಂಗಿಗಳು..

    ಅರೆಯ ಗ್ರಾಮದ ನಿವಾಸಿ ವಿಶಾಲ್ ಪ್ರಜಾಪತಿ (15 ವರ್ಷ) ಗ್ರಾಮದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ನೀರು ತಾಂಡ್‌ನಲ್ಲಿರುವ ಮುನ್ನಾ ಓರಾನ್‌ನ ಗದ್ದೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಹೊಲ ಉಳುಮೆ ಮಾಡುತ್ತಿದ್ದನು. ಈ ವೇಳೆ ಶ್ರೇಯಾಂಶ್ ಸಾಹು (5) ಅದೇ ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದ. ಈ ನಡುವೆ ಶ್ರೇಯಾಂಶ್ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಮಗುವಿನ ಸಾವಿನ ಸುದ್ದಿಯು ಗ್ರಾಮದಲ್ಲಿ ಹರಡಿದ್ದು, ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ವಯಸ್ಕ ಚಾಲಕನನ್ನು ಮನಬಂದಂತೆ ಥಳಿಸಿದ್ದಾರೆ. ಪರಿಣಾಮವಾಗಿ ಚಾಲಕನೂ ಕೂಡ ಮೃತಪಟ್ಟಿದ್ದಾನೆ. ಆದರೆ ಅಪ್ರಾಪ್ತ ಚಾಲಕನನ್ನು ಹೊಡೆದು ಸಾಯಿಸಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.

    ಘಟನೆಯ ಮಾಹಿತಿ ಪಡೆದ ಬಾಗಡು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಎರಡೂ ಕಡೆಯವರ ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದ್ದು, ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts