More

    ಮಹಾಗಣಪತಿ ದೇವಸ್ಥಾನಕ್ಕೆ ಟಾರ್ಪಲ್ ಹೊದಿಕೆ

    ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನ ಮಳೆಯಿಂದ ಸಂಪೂರ್ಣ ಸೋರುತ್ತಿದ್ದು ದೇವಸ್ಥಾನದ ಕಟ್ಟಡ ರಕ್ಷಣೆ ಮಾಡಲು ಭಕ್ತಾದಿಗಳು ಟಾರ್ಪಲï ಹೊದಿಸಿ ಆಡಳಿತದ ಗಮನ ಸೆಳೆದಿz್ದÁರೆ. ದೇವಸ್ಥಾನ ಸೋರುತ್ತಿರುವ ಕುರಿತು ಮಹಾಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ.ಹೆಗಡೆ ಉಪವಿಭಾಗಾಽಕಾರಿಗಳಿಗೆ ದೇವಸ್ಥಾನವನ್ನು ತುರ್ತು ರಿಪೇರಿ ಮಾಡಿಸಲು ಮನವಿ ಸಲ್ಲಿಸಿz್ದÁರೆ.

    ಸಾಗರದ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಮರ‍್ನಾಲ್ಕು ವರ್ಷ ಕಳೆದಿದೆ. ಮಳೆಗೆ ದೇವಸ್ಥಾನದ ಮುಖ ಮಂಟಪ ಸಂಪೂರ್ಣ ಸೋರುತ್ತಿದ್ದು ಭಕ್ತರು ಒಳಗೆ ಬರಲು ಭಯಪಡುವಂತÀಹ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಸೋರಿದ ನೀರು ಭಕ್ತರು ದೇವರ ದರ್ಶನ ಪಡೆಯುವ ಜಾಗದಲ್ಲಿ ನಿಲ್ಲುತ್ತಿದೆ. ನೀರು ವಿದ್ಯುತ್ ತಂತಿಗಳಿಗೆ ತಗುಲುವುದರಿಂದ ಆಧಾರಕ್ಕಾಗಿ ಕೊಟ್ಟ ಸ್ಟೀಲï ಪೈಪ್ ಹಾಗೂ ಸ್ಟೀಲï ಗೇಟ್‌ಗಳನ್ನು ಮುಟ್ಟಿದರೆ ಶಾಕ್ ಹೊಡೆಯುತ್ತಿದೆ. ಶ್ರಾವಣ ಮಾಸದಲ್ಲಿ ಹಬ್ಬಗಳು ಹೆಚ್ಚು. ಈ ಸಂದರ್ಭದಲ್ಲಿ ಭಕ್ತರು ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳುವಂತೆ ಮನವಿ ಮೂಲಕ ಒತ್ತಾಯಿಸಿz್ದÁರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts