More

    ಇನ್ನು ಈ ಆಟದಲ್ಲಿ ನಾನಿಲ್ಲ … ಹಾಗಂತ ತಾಪ್ಸಿ ಹೇಳಿದ್ದು ಯಾಕೆ?

    ಸುಶಾಂತ್​ ಸಾವಿನ ಹಿನ್ನೆಲೆಯಲ್ಲಿ ಕಂಗನಾ ಮತ್ತು ಇತರರ ವಿರುದ್ಧ ನಡೆಯುತ್ತಿರುವ ಗಲಾಟೆಗೆ ಕೊನೆಗೂ ಒಂದು ತಿರುವು ಸಿಕ್ಕಿದೆ. ಈಗಾಗಲೇ ಸಾಕಷ್ಟು ಆರೋಪಗಳನ್ನು ಕೇಳಿಸಿಕೊಂಡು, ಅದಕ್ಕೆ ತಕ್ಕ ಉತ್ತರಗಳನ್ನೂ ನೀಡಿರುವ ತಾಪ್ಸಿ, ಇನ್ನು ಈ ಆಟದಲ್ಲಿ ತಾವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

    ಇದಕ್ಕೂ ಮುನ್ನ, ತಾಪ್ಸಿ ಪನ್ನು, ಸ್ವರಾ ಭಾಸ್ಕರ್​ ಮತ್ತು ರಿಚಾ ಚಡ್ಡಾ ವಿರುದ್ಧ ತಿರುಗಿ ಬಿದ್ದಿರುವ ಕಂಗನಾ ಅವರನ್ನು ಬಿ ಗ್ರೇಡ್​ ನಟಿಯರು ಎಂದು ಕಂಗನಾ ಕರೆದಿದ್ದರು. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಕೆಲವರಿಗೆ ಅವರದ್ದೇ ಆದ ಕಮಿಟ್​ಮೆಂಟ್​ ಇರುತ್ತದೆ, ಪ್ರತಿ ತಿಂಗಳು ಇಎಂಐ ಕಟ್ಟುವುದಿರುತ್ತದೆ, ಅದೇ ಕಾರಣಕ್ಕೆ ಅವರು ಬಾಲಿವುಡ್​ನ ಪ್ರಭಾವಿಗಳನ್ನು ಎದುರು ಹಾಕಿಕೊಳ್ಳುತ್ತಿಲ್ಲ ಎಂದು ತಾಪ್ಸಿ, ಸ್ವರಾ ಮತ್ತು ರಿಚಾ ಅವರ ಹೆಸರುಗಳನ್ನು ತೆಗೆಯದೇ ಪರೋಕ್ಷವಾಗಿ ಹೇಳಿದ್ದರು.

    ಇದನ್ನೂ ಓದಿ: ಕರೊನಾ ಹೊತ್ತಲ್ಲಿ ಪುನೀತ್​ ರಾಜಕುಮಾರ್ ‘ಏನು ಮಾಡೋದು ಸ್ವಾಮಿ..’ ಅಂತಿರೋದ್ಯಾಕೆ?

    ಇದಕ್ಕೆ ತಾಪ್ಸಿ ಪ್ರತ್ಯುತ್ತರವನ್ನೂ ನೀಡಿದ್ದರು. ‘ನಮ್ಮ ಬಗ್ಗೆ ಕೆಲವರಿಗೆ ವಿಪರೀತ ಎನ್ನುವಷ್ಟು ಕಾಳಜಿ ಇದೆ. ಚಿತ್ರರಂಗದಲ್ಲಿ ಇಂತಹ ಸಹೃದಯರು ಇದ್ದಾರೆ ಎಂದು ಗೊತ್ತಿರಲಿಲ್ಲ. ಅದರಲ್ಲೂ ಬಿ ಗ್ರೇಡ್​ ನಟಿಯರ ಕುರಿತಾಗಿ ಅವರು ತೋರಿಸುತ್ತಿರುವ ಪ್ರೀತಿ ಮತ್ತು ಗೌರವ ಖುಷಿ ಕೊಡುತ್ತದೆ’ ಎಂದು ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದರು.

    ಇದಕ್ಕೆ ಕಂಗನಾ ಇನ್ನೇನೋ ಮಾತಾಡಿದ್ದರು. ಹೀಗೆ ಆರೋಪ, ಪ್ರತ್ಯಾರೋಪಗಳಿಂದ ಪ್ರಕರಣ ಎಲ್ಲಿಂದ ಎಲ್ಲಿಗೋ ಹೋಗುತ್ತಿರುವುದನ್ನು ನೋಡಿ, ಸ್ವತಃ ತಾಪ್ಸಿ ಸುಸ್ತಾಗಿದ್ದಾರೆ. ಇದೆಲ್ಲಕ್ಕೂ ಒಂದು ಅಂತ್ಯ ಹಾಡಬೇಕು ಎಂದು ತೀರ್ಮಾನಿಸಿರುವ ಅವರು, ಇನ್ನು ಮುಂದೆ ಈ ವಿಷಯವಾಗಿ ತಾವು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಸಿಲಿಕಾನ್ ಸಿಟಿಯಿಂದ ದೂರವಿದ್ದು ಕೃಷಿಯಲ್ಲೇ ಖುಷಿ ಕಾಣುತ್ತಿರುವ ಕರಾವಳಿ ಕುವರಿ!

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಈ ವಿಷಯ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ. ಈ ವಿಚಾರವಾಗಿ ನನ್ನ ನಿಲುವು ಬದಲಾಗುವುದರೊಳಗೆ, ನಾನು ಸೈನ್​ ಔಟ್​ ಮಾಡುವುದು ವಾಸಿ. ಇನ್ನು ಮುಂದೆ ಈ ಆಟದಲ್ಲಿ ನಾನಿಲ್ಲ’ ಎಂದು ತಾಪ್ಸಿ ಹೇಳಿ ಸುಮ್ಮನಾಗಿದ್ದಾರೆ.

    ತಾಪ್ಸಿಯೇನೋ ಸುಮ್ಮನಾಗಿದ್ದಾರೆ. ಕಂಗನಾ ಈ ವಿಷಯವನ್ನು ಇನ್ನೂ ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೋ ಎಂಬ ಕುತೂಹಲ ಮಾತ್ರ ಎಲ್ಲರಲ್ಲೂ ಇದ್ದೇ ಇದೆ.

    PHOTO: ಸಾಕು ನಾಯಿ ಜತೆ ಕೃತಿ ಖರಬಂದ ಲಿಪ್​ಲಾಕ್​!; ಫೋಟೋ ನೋಡಿ ಹೌಹಾರಿದ ನೆಟ್ಟಿಗರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts