ಆನೇಕಲ್ (ಬೆಂಗಳೂರು): ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು ತಾಳಿ ಕಟ್ಟಿದ ಪತಿಗೆ ಸಾವಿನ ದಾರಿ ತೋರಿಸಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಮೇತ ಸಿಕ್ಕಿಬಿದ್ದಿರುವ ಘಟನೆ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ಹಾರಗದ್ದೆಯಲ್ಲಿ ನಡೆದಿದೆ.
ಅಕ್ಟೋಬರ್ 17ರಂದು ಕೊಲೆ ನಡೆದಿತ್ತು. ಮಾದೇಶ್ ಎಂಬಾತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲಲಾಗಿತ್ತು. ಇದೇ ಪ್ರಕರಣದಲ್ಲಿ ಮೃತ ಮಾದೇಶ್ ಪತ್ನಿ ಪ್ರೇಮಾ, ಆಕೆಯ ಪ್ರಿಯಕರ ಶಿವಮಲ್ಲ ಅಲಿಯಾಸ್ ಕರಿಯ ಮತ್ತು ಕೊಲೆಗೆ ಸಹಕರಿಸಿದ ಸ್ನೇಹಿತ ಮಲ್ಲೇಶ್ನನ್ನು ಬಂಧಿಸಲಾಗಿದೆ.
ಪ್ರೇಮಾ ಮತ್ತು ಮಾದೇಶ್ ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಇವರು ತಮಿಳುನಾಡು ಮೂಲದವರು. ಕೆಲಸ ಅರಸಿ ಜಿಗಣಿಯಲ್ಲಿ ವಾಸವಿದ್ದರು. ಕರೊನಾ ಲಾಕ್ಡೌನ್ ಸಮಯದಲ್ಲಿ ದಂಪತಿ ತಮಿಳುನಾಡಿಗೆ ಹೋಗಿದ್ದರು. ಆಗ ಆರೋಪಿ ಕರಿಯ ಮತ್ತು ಪ್ರೇಮಾ ನಡುವೆ ಪ್ರೇಮಾಂಕುರವಾಗಿತ್ತು.
ಇದನ್ನೂ ಓದಿ: ಕುತ್ತಿಗೆಯಲ್ಲಾದ ಬದಲಾವಣೆ ನಿರ್ಲಕ್ಷಿಸಿದ ಯುವತಿ: ಕೊನೆಗೆ ವೈದ್ಯರ ಬಳಿ ಹೋದವಳಿಗೆ ಕಾದಿತ್ತು ಶಾಕ್!
ಪ್ರೇಮಾಗೆ ಮದುವೆಯಾಗಿ ಮಕ್ಕಳಿದ್ದರು ಸಹ ಕರಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇಬ್ಬರ ಅಕ್ರಮ ಸಂಬಂಧ ಪತಿಗೆ ತಿಳಿದಿರಲಿಲ್ಲ. ಈ ನಡುವೆ ಪ್ರೇಮಾ, ಪ್ರಿಯಕರ ಕರಿಯ ಜತೆ ಬಾಳುವುದಕ್ಕೆ ನಿರ್ಧಾರ ಮಾಡಿದ್ದಳು. ಆದರೆ, ಇಬ್ಬರ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಗೋಡೆಯಾಗಿದ್ದರಿಂದ ಆತನನ್ನು ಕೊಲೆ ಮಾಡಲು ಪ್ರಿಯಕರನ ಜತೆ ಸೇರಿ ಸಂಚು ರೂಪಿಸಿದ್ದಳು.
ಕರಿಯನಿಗೆ ಸಾಥ್ ನೀಡಿದ ಸ್ನೇಹಿತ ಮಲ್ಲೇಶ್, ಮಾದೇಶ್ನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಮಾದೇಶ್ ಕುಟಂಬದ ಮೇರೆಗೆ ದೂರು ದಾಖಲಿಸಿಕೊಂಡಿದ್ದ ಜಿಗಣಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಶುರುವಾಗಿದೆ 5 ಅಂತಸ್ತಿನ ವಯಸ್ಕರ ಥೀಮ್ಪಾರ್ಕ್- ಪೋರ್ನ್ ಸ್ಟಾರ್ಗಳಿಂದಲೇ ಸೇವೆ!