More

    VIDEO| ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಹಾಡಿಹೊಗಳಿದ ಬಾಲಿವುಡ್ ನಟಿಮಣಿಯರು

    ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ನಾರಿ ಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ)vನ್ನು ಶ್ಲಾಘಿಸಿರುವ ಬಾಲಿವುಡ್​ ನಟಿಯರಾದ ತಮನ್ನಾ ಭಾಟಿಯಾ, ದಿವ್ಯ ದತ್ತ, ಶೆಹನಾಜ್​ ಗಿಲ್​ ಇದೊಂದು ಅತ್ಯುತಮ್ಮ ನಡೆ. ಮಹಿಳೆಯರು ರಾಜಕೀಯಕ್ಕೆ ಬರಲು ಸ್ಪೂರ್ತಿ ನೀಡುತ್ತದೆ ಎಂದಿದ್ದಾರೆ.

    ನೂತನ ಸಂಸತ್​ ಭವನಕ್ಕೆ ಭೇಟಿ ನೀಡಿದ ಮೂವರು ನಟಿಯರು ಕೇಂದ್ರ ಸರ್ಕಾರದ ಕ್ರಮವನ್ನು ಹಾಡಿ ಹೊಗಳಿಸಿದ್ದಾರೆ. ಇವರ ಜೊತೆಗೆ ಬಾಲಿವುಡ್​ನ ಹಲವು ನಟಿಯರು ಮಸೂದೆಯನ್ನು ಸ್ವಾಗತಿಸಿದ್ದಾರೆ. ಇವರ ಜೊತೆಗೆ ನಟಿಯರಾದ ಖುಷ್ಬೂ ಸುಂದರ್​, ಹರ್​ನಾಜ್​ ಕೌರ್​ ಸಂಧು, ಸ್ಮೃತಿ ಕಲ್ರಾ, ಸೋನಾಲ್​ ಮಾಥುರ್​, ಕೀರ್ತಿ ಕುಲ್ಹರಿ ನೂತನ ಸಂಸತ್​ ಭವನಕ್ಕೆ ಭೇಟಿ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ನಟಿ ತಮನ್ನಾ ಈ ಮಸೂದೆ ಸಾಮಾನ್ಯ ಜನರಿಗೆ ರಾಜಕೀಯಕ್ಕೆ ಬರಲು ಹೆಚ್ಚು ಉತ್ತೇಜನ ನೀಡುತ್ತದೆ. ಮಹಿಳೆಯರು ರಾಜಕೀಯಕ್ಕೆ ಬರುತ್ತೇವೆ ಎಂದರೆ ಪ್ರೋತ್ಸಾಹಿಸುವವರಿಗಿಂತ ಮೂಗು ಮುರಿಯುವವರೇ ಹೆಚ್ಚು. ಸರ್ಕಾರ ಮಹಿಳೆಯರಿಗೆ ಮೀಸಲಾತಿ ಜಾರಿ ಮಾಡಲು ಮುಂದಾಗಿರುವುದನ್ನು ಕಂಡಾಗ ರಾಜಕೀಯಕ್ಕೆ ಬರಲು ಸ್ಪೂರ್ತಿಯಾಗುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಸ್ತು; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನೂತನ ಸಂಸತ್

    ನಟಿ ದಿವ್ಯ ದತ್ತ ಮಾತನಾಡಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಒಂದು ದೊಡ್ಡ ಉಪಕ್ರಮವಾಗಿದೆ. ಇದು ನಿಜವಾಗಿಯೂ ಉತ್ತಮ ಕ್ರಮವಾಗಿದ್ದು, ಮಹಿಳೆಯರನ್ನು ಈ ಮಸೂದೆ ಮೂಲಕ ಮುಂದಕ್ಕೆ ತರಲಾಗುತ್ತಿದೆ. ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಿರುವುದು ಒಂದು ವಿಶೇಷ ಅನುಭವ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

    ನಟಿ ಶಹನಾಜ್​ ಗಿಲ್​ ಮಾತನಾಡಿ ಸರ್ಕಾರದ ವತಿಯಿಂದ ಇದೊಂದು ಅತ್ಯದ್ಭುತ ನಡೆಯಾಗಿದೆ. ನಮಗೆ ಹಕ್ಕು ಮತ್ತು ಸಮಾನತೆಯನ್ನು ನೀಡಿದರೆ ಪೋಷಕರು ಹೆಣ್ಣುಮಕ್ಕಳನ್ನು ಬೆಂಬಲಿಸಲು ಶುರು ಮಾಡುತ್ತಾರೆ. ನಾನು ಒಂದು ಪುಟ್ಟ ಹಳ್ಳಿಯಿಂದ ಬಂದಿದ್ದು, ಅಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡಿದರೆ ಸೆಟಲ್​ ಆಗುತ್ತಾರೆ ಎಂಬ ಭಾವನೆಯಿದೆ. ಹೆಣ್ಣು ಮತ್ತು ಗಂಡು ಇಬ್ಬರನ್ನು ಸಮಾನವಾಗಿ ನೋಡಿದರೆ ದೇಶದಲ್ಲಿ ಬಹಳಷ್ಟು ಬದಲಾವಣೆಯಾಗುತ್ತದೆ ಎಂದು ನಟಿ ಶೆಹನಾಜ್​ ಗಿಲ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts