More

    ತಹಸೀಲ್ದಾರ್ ಎನ್.ಬಿ. ಗೆಜ್ಜೆ ವರ್ಗಾವಣೆ

    ಚಡಚಣ: ಚಡಚಣ ತಾಲೂಕು ಗ್ರೇಡ್-1 ತಹಸೀಲ್ದಾರ್ ಎನ್.ಬಿ. ಗೆಜ್ಜೆ ಅವರನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಗ್ರೇಡ್-1 ತಹಸೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
    ಚಡಚಣ ತಾಲೂಕಿಗೆ ಯಾವುದೇ ಅಧಿಕಾರಿಯನ್ನು ನಿಯುಕ್ತಿಗೊಳಿಸದ ಪರಿಣಾಮ ತಹಸೀಲ್ದಾರ್ ಹುದ್ದೆ ತೆರವಾಗಿದೆ. ಈಗಾಗಲೇ ಒಂದು ತಿಂಗಳಿನಿಂದ ಚಡಚಣ ಪಿಎಸ್‌ಐ ಹುದ್ದೆ ಕೂಡ ತೆರವಾಗಿದೆ.
    ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಭೀಮೆಗೆ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ, ಕರೊನಾದಂತಹ ಸಂಕಷ್ಟ ಕಾಲದಲ್ಲಿ ಜನರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದು, ಜನರ ಅನುಕೂಲಕ್ಕಾಗಿ ಚಡಚಣ ತಾಲೂಕಿಗೆ ಒಬ್ಬ ದಕ್ಷ ಕೆಎಎಸ್ ಅಧಿಕಾರಿಯನ್ನು ತಹಸೀಲ್ದಾರ್ ಹುದ್ದೆಗೆ ಹಾಗೂ ತೆರವಾಗಿರುವ ಪಿಎಸ್‌ಐ ಹುದ್ದೆಗೆ ಅಧಿಕಾರಿಯನ್ನು ಸರ್ಕಾರ ಕೂಡಲೇ ನಿಯೋಜಿಸಬೇಕು ಎಂಬುದು ಸಾರ್ವಜನಿರ ಆಗ್ರಹವಾಗಿದೆ.
    ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರ ಗಮನಕ್ಕೆ ತರದೆ ರಾಯಬಾಗ ಪಟ್ಟಣದ ಗೈರಾಣ ಜಮೀನಿನಲ್ಲಿ ವಾಸಿಸುತ್ತಿದ್ದ 150 ಜನರ ಮೇಲೆ ಅಲ್ಲಿನ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ವಿವಿಧ ಆರೋಪದಡಿ ಪ್ರಕರಣ ದಾಖಲಿಸಿದ್ದರಿಂದ ಶಾಸಕ ಐಹೊಳೆ ಚಂದ್ರಕಾಂತ ಅವರ ಸ್ಥಾನಕ್ಕೆ ವಿಜಯಪುರ ಜಿಲ್ಲೆಯ ಚಡಚಣ ಗ್ರೇಡ್-1 ತಹಸೀಲ್ದಾರ್ ಎನ್.ಬಿ. ಗೆಜ್ಜೆ ಅವರನ್ನು ನೇಮಕ ಮಾಡಬೇಕೆಂದು ಕೋರಿ ಮುಖ್ಯಮಂತ್ರಿಯವರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts