More

    ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್​ ಕ್ವಾರಂಟೈನ್ ಅವಧಿ ಏ.13ಕ್ಕೆ ಮುಕ್ತಾಯ; ಇನ್ನಾದ್ರೂ ವಿಚಾರಣೆಗೆ ಹಾಜರಾಗುತ್ತಾರಾ? ಕ್ರಮಕ್ಕೆ ಪೊಲೀಸರ ಸಿದ್ಧತೆ

    ದೆಹಲಿ: ನಿಜಾಮುದ್ದೀನ್ ಮಾರ್ಖಜ್​ ಕರೊನಾ ವೈರಸ್​ ಹಾಟ್​ಸ್ಫಾಟ್​ ಆಗಲು ಕಾರಣವಾದ ತಬ್ಲಿಘಿ ಜಮಾತ್​ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್​ ಖಂಡಲ್ವಿ ಸೇರಿ ಒಟ್ಟು ಏಳು ಜನರ ಕ್ವಾರಂಟೈನ್​ ಅವಧಿ ಸೋಮವಾರ ಮುಕ್ತಾಯಗೊಂಡಿದೆ.

    ಹೀಗಾಗಿ ದೆಹಲಿ ಪೊಲೀಸರು ಮೌಲಾನಾ ಸಾದ್ ಅವರನ್ನು ಶೀಘ್ರವೇ ವಿಚಾರಣೆಗೆ ಹಾಜರಾಗಲು ಹೇಳಲಿದ್ದಾರೆ ಎನ್ನಲಾಗಿದೆ.
    ಕರೊನಾ ವೈರಸ್ ನಿಯಂತ್ರಣಕ್ಕಾಗಿ ಮಾರ್ಚ್​ನಲ್ಲಿ ದೆಹಲಿ ಸರ್ಕಾರ ಗುಂಪುಗೂಡುವುದನ್ನು ನಿರ್ಬಂಧಿಸಿದ್ದರೂ, ಅದನ್ನು ಲೆಕ್ಕಿಸದೆ ತಬ್ಲಿಘಿ ಜಮಾತ್​ ಸಭೆ ನಡೆಸಿತ್ತು. ಅದರಲ್ಲಿ ದೇಶ-ವಿದೇಶಗಳ ಸಾವಿರಾರು ಮುಸ್ಲಿಮರು ಪಾಲ್ಗೊಂಡಿದ್ದರು. ಈಗ ಬಹುತೇಕ ಅವರಿಗೆಲ್ಲ ಕರೊನಾ ವೈರಸ್ ತಗುಲಿದೆ. ಆದರೆ ತಬ್ಲಿಘಿ ಮುಖ್ಯಸ್ಥ ಮೌಲಾನಾ ಸಾದ್ ಮಾ.28ರಿಂದಲೇ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ ಪೊಲೀಸರು ಎಫ್​ಐಆರ್​ ಕೂಡ ದಾಖಲಿಸಿದ್ದಾರೆ.

    ಮಾ.28ರಿಂದಲೂ ನಾಪತ್ತೆಯಾಗಿರುವ ಮೌಲಾನಾ ಸಾದ್​ ತಾವು ಕ್ವಾರಂಟೈನ್​ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಸಾದ್​ ಅವರು ಕ್ವಾರಂಟೈನ್​ ಅವಧಿ ಮುಗಿದ ತಕ್ಷಣ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಏ.8ರಂದು ಅವರ ವಕೀಲರು ಹೇಳಿದ್ದರು. ಈಗ ಏ.13ರಂದು ಕ್ವಾರಂಟೈನ್​ ಮುಗಿದಿದೆ.

    ಧಾರ್ಮಿಕ ಸಭೆ ಮುಗಿದ ಬಳಿಕ ದೆಹಲಿ ನಿಜಾಮುದ್ದೀನ್​ ಮರ್ಖಜ್​​ನಲ್ಲೇ ಬೀಡು ಬಿಟ್ಟಿದ್ದ ಸಾದ್ ಅವರಿಗೆ ಸ್ಥಳ ಖಾಲಿ ಮಾಡುವಂತೆ, ಅಲ್ಲಿಂದ ತೆರಳುವಂತೆ ಎರಡು ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಆದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
    ಮೌಲಾನಾ ಎಲ್ಲಿದ್ದಾರೆ ಎಂಬ ಬಗ್ಗೆ ಸುಳಿವಿಲ್ಲ. ಆದರೆ ಕ್ವಾರಂಟೈನ್​ ಅವಧಿ ಮುಗಿದಿದ್ದರಿಂದ ಅವರೇ ಹೇಳಿದಂತೆ ವಿಚಾರಣೆಗೆ ಆಗಮಿಸಬೇಕಾಗಿದೆ. ಈ ಬಗ್ಗೆ ದೆಹಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts