ಬೆಂಗಳೂರು: ಪಂ.ಸತೀಶ್ ಹಂಪಿಹೊಳಿ ಮ್ಯೂಸಿಕ್ ೌಂಡೇಶನ್ ಟ್ರಸ್ಟ್ ಹಾಗೂ ದತ್ತಾತ್ರೇಯ ದೇವಸ್ಥಾನಮ ಟ್ರಸ್ಟ್ ಸಹಯೋಗದಲ್ಲಿ ಡಿ.24ರಂದು ಸಂಜೆ 6 ಗಂಟೆಗೆ ಸ್ವರಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತ್ಯಾಗರಾಜನಗರದಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಚಿತ್ರ ನಟ ಶ್ರೀಧರ್, ಸಂಗೀತ ಗಂಗಾ ಸಂಸ್ಥೆ ಅಧ್ಯಕ್ಷ ಡಾ. ಹೇಮಾ ಪ್ರಸಾದ್ ಭಾಗವಹಿಸಲಿದ್ದಾರೆ.
ಹಿಂದೂಸ್ಥಾನಿ ಗಾಯನದಲ್ಲಿ ವಿ ವೀಣಾ ಮರಡೂರು ಹಾಗೂ ವಾಣಿ ಮರಡೂರು ಧ್ವನಿಯಾಗಲಿದ್ದಾರೆ. ವಿ ನಾಗೇಂದ್ರ ರಾಣಾಪೂರ್ ನಿರ್ದೇಶನದಲ್ಲಿ ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆ ವಿದ್ಯಾರ್ಥಿಗಳು ಹಾಗೂ ಉಮಾ ಕುಲಕರ್ಣಿ ಹಾಡಲಿದ್ದಾರೆ.