ಬೆಂಗಳೂರು: ಮಕರ ಸಂಕ್ರಾಂತಿ ದಿನವಾದ ಇಂದು ನಗರದ ಪ್ರಸಿದ್ಧ ಶ್ರೀ ಗವಿಗಂಗಾಧರೇಶ್ವರ ಸ್ವಾಮಿಯನ್ನ ಸೂರ್ಯರಶ್ಮಿಯ ಅಭಿಷೇಕವಾಯಿತು. ದಕ್ಷಿಣಾಯಣ ಪಥ ಮುಗಿಸಿ ಉತ್ತರಾಯಣಕ್ಕೆ ಸಾಗುವ ಸೂರ್ಯ ದೇವನು ಸಂಜೆ 5.20 ರಿಂದ 5.36ರವರೆಗೆ ದೇಗುಲದ ಶಿವಲಿಂಗವನ್ನ ಸ್ಪರ್ಶಿಸಿತು.
ಈ ಅಪರೂಪದ ಕ್ಷಣಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ನೆಲಮಟ್ಟಕ್ಕಿಂದ 120 ಅಡಿ ಆಳದಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನ ಸೂರ್ಯರಶ್ಮಿಯು ಹಾದುಹೋಯಿತು. ಸೂರ್ಯಾಭಿಷೇಕದ ವೇಳೆ ಶಿವನ ವಿಗ್ರಹಕ್ಕೆ ದೇವಾಲಯದ ಪ್ರಧಾನ ಅರ್ಚಕ ಡಾ.ಸೋಮಸುಂದರ ದೀಕ್ಷಿತ್ ಅವರು ಎಳನೀರು ಮತ್ತು ಹಾಲಿನ ಅಭಿಷೇಕ ಮಾಡಿದರು. ಸಾವಿರಾರು ಭಕ್ತರು ಶಿವನಾಮ ಜಪಿಸುತ್ತಾ ಭಕ್ತಿಯ ಪರಾಕಷ್ಟೆ ಮೆರೆದರು.
ನೂಡಲ್ಸ್ ತಿನ್ನುವ ಆಸೆಯಲ್ಲಿದ್ದ ಬೆಂಗಳೂರಿನ ಮಹಿಳೆಗೆ ಶಾಕ್! ಮಸಾಲ ಪ್ಯಾಕೇಟ್ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆ!
ಮಟಮಟ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು! ಬೆಚ್ಚಿಬಿದ್ದ ಸ್ಥಳೀಯರು