ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ದುಬೈನಿಂದ ವಾಪಸ್ ಆಗಿದ್ದಾರೆ. ಸುರೇಶ್ ರೈನಾ ಅವರ ಹತ್ತಿರದ ಸಂಬಂಧಿಗಳಿಗೆ ತೊಂದರೆ ಆಗಿದ್ದರಿಂದ ಅವರು ಏಕಾಏಕಿ ವಾಪಸ್ ಬಂದಿದ್ದಾರೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಹಾಗೇ, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಲವರಿಗೆ ಕರೊನಾ ದೃಢಪಟ್ಟಿದ್ದರಿಂದ ಸುರೇಶ್ ರೈನಾ ಆತಂಕಗೊಂಡಿದ್ದರು. ಅವರನ್ನು ತಂಡದ ಮ್ಯಾನೇಜ್ಮೆಂಟ್ ಎಷ್ಟೇ ಸಮಾಧಾನ ಮಾಡಿದರೂ ಅವರು ಭಾರತಕ್ಕೆ ವಾಪಸ್ ಹೋಗಿದ್ದಾರೆ ಎಂದೂ ಮೂಲಗಳು ತಿಳಿಸಿದ್ದವು. ಒಟ್ಟಿನಲ್ಲಿ ಸುರೇಶ್ ರೈನಾ ಏಕಾಏಕಿ ವಾಪಸ್ ಆಗಲು ನಿಖರ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ರೈನಾ ಅಭಿಮಾನಿಗಳು..ಸಿಎಸ್ಕೆ ಅಭಿಮಾನಿಗಳಂತೂ ಸದ್ಯ ಫುಲ್ ಶಾಕ್ನಲ್ಲಿದ್ದಾರೆ. ಹೀಗಿರುವಾಗ ಸಿಎಸ್ಕೆ ಮಾಲೀಕ ಎನ್. ಶ್ರೀನಿವಾಸನ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರೈನಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ಯಶಸ್ಸೆಂಬುದು ತಲೆಗೆ ಹತ್ತುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿ20 ಪಂದ್ಯದ ವೇಳೆಯೂ ಆಕಳಿಸಿ ಟ್ರೋಲ್ಗೆ ಒಳಗಾದ ಪಾಕ್ ಕ್ರಿಕೆಟಿಗ ಸರ್ಫ್ರಾಜ್ ಅಹ್ಮದ್!
ಕೆಲವು ಕ್ರಿಕೆಟರ್ಗಳು ಹಳೇ ಕಾಲದ ನಟ-ನಟಿಯರಂತೆ ಸಿಡುಕು ಮನೋಧರ್ಮದವಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಒಂದು ಕುಟುಂಬದಂತೆ ಇದೆ. ತಂಡದ ಹಿರಿಯ ಆಟಗಾರರೆಲ್ಲ ಪರಸ್ಪರ ಹೊಂದಿಕೊಂಡಿದ್ದಾರೆ. ನಾನೂ ಅಷ್ಟೇ, ಯಾರಿಗಾದರೂ ಇಲ್ಲಿ ಸಂತೋಷವಾಗಿರಲು ಸಾಧ್ಯವಾಗುತ್ತಿಲ್ಲ ಎಂದರೆ ಹೊರಡಬಹುದು ಎಂದು ಹೇಳಿಬಿಟ್ಟಿದ್ದೇನೆ. ಯಶಸ್ಸು ತಲೆಗೆ ಏರಿದಾಗ ನಾವೇನೂ ಹೇಳಲು ಸಾಧ್ಯವಿಲ್ಲ ಎಂದು ಶ್ರೀನಿವಾಸನ್ ಬೇಸರ ಹೊರಹಾಕಿದ್ದಾರೆ.
ಇನ್ನು ಪಿಟಿಐ ವರದಿ ಪ್ರಕಾರ ಸುರೇಶ್ ರೈನಾ ತಂಡವನ್ನು ಬಿಟ್ಟು ವಾಪಸ್ ಬರಲು ಕಾರಣ ಕೊಠಡಿ ವಿಚಾರದಲ್ಲಿ ಉಂಟಾದ ಅಸಮಾಧಾನ. ಕೊವಿಡ್-19 ಇರುವುದರಿಂದ ನನಗೂ ಪ್ರತ್ಯೇಕ ಕೊಠಡಿ ಬೇಕು. ನಾಯಕ ಎಂ.ಎಸ್.ಧೋನಿಗೆ ನೀಡಿರುವಂಥ, ಬಾಲ್ಕನಿ ಇರುವ ರೂಂನ್ನು ನನಗೂ ಕೊಡಿ ಎಂದು ಸುರೇಶ್ ರೈನಾ ಕೇಳಿದ್ದಾರೆ. ಆದರೆ ಸಿಎಸ್ಕೆ ನಿಯಮದ ಪ್ರಕಾರ, ಕೋಚ್, ಕ್ಯಾಪ್ಟನ್ ಮತ್ತು ಟೀಂ ಮ್ಯಾನೇಜರ್ಗೆ ಮಾತ್ರ ವಿಶೇಷ ಕೊಠಡಿ ಸೌಲಭ್ಯ ಇರುತ್ತದೆ. ಆದರೆ ರೈನಾ ಈ ಬಾರಿ ತಮಗೂ ಬೇಕೆಂದು ಬೇಡಿಕೆ ಇಟ್ಟು, ಅದನ್ನು ಟೀಂ ಮ್ಯಾನೇಜ್ಮೆಂಟ್ ನಿರಾಕರಿಸಿದ್ದಕ್ಕೆ ಕುಪಿತಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವಿಚಾರವಾಗಿ ಕ್ಯಾಪ್ಟನ್ ಧೋನಿಯವರೂ ಸುರೇಶ್ ರೈನಾರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಠಾಣೆಯ ಬಳಿಯೇ ಪೊಲೀಸ್ ಅಧಿಕಾರಿಯ ಮೇಲೆ ದಾಳಿ ಮಾಡಿದ ರೊಚ್ಚಿಗೆದ್ದ ಎಮ್ಮೆ; ಭಯಾನಕ ವಿಡಿಯೋ ವೈರಲ್
ಸುರೇಶ್ ರೈನಾ ಸಿಎಸ್ಕೆ ತಂಡದಿಂದ ಹೋಗಲು ಕಾರಣ ಯಾವುದೇ ಇರಬಹುದು. ಆದರೆ ಅವರಿನ್ನು ಈ ಬಾರಿಯ ಐಪಿಎಲ್ಗೆ ಮರಳುವ ಸಾಧ್ಯತೆ ತೀರ ಕಡಿಮೆ ಎಂದು ಹೇಳಲಾಗಿದೆ. ಅಷ್ಟೇ ಏಕೆ, ಮುಂದಿನ ವರ್ಷದ ಐಪಿಎಲ್ನಲ್ಲೂ ಸಿಎಸ್ಕೆಯಲ್ಲಿ ರೈನಾ ಆಡಲಾರರು ಎಂದು ಟೀಂ ಮೂಲಗಳೇ ಮಾಹಿತಿ ನೀಡಿವೆ.
ಈ ಸೀಸನ್ನಲ್ಲಂತೂ ಸುರೇಶ್ ರೈನಾ ಲಭ್ಯ ಇರುವುದಿಲ್ಲ ಎಂದು ಸಿಎಸ್ಕೆ ಅಧಿಕೃತ ಹೇಳಿಕೆಯನ್ನೇ ಬಿಡುಗಡೆ ಮಾಡಿದೆ. ನಿವೃತ್ತರಾಗಿರುವ ಅಥವಾ ಈ ಬಾರಿ ಇಲ್ಲಿ ಆಡದಿರುವ ಯಾವುದೇ ಕ್ರಿಕೆಟರ್ ಮರಳಿ ತಂಡಕ್ಕೆ ಬರುವುದು ಅಸಂಭವ. ಬಹುಶಃ ಅವರು ಮುಂದಿನ ಐಪಿಎಲ್ ಹರಾಜಿಗೆ ಮರಳಬಹುದು ಮತ್ತು ಬೇರೆ ಯಾರಾದರೂ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಿಎಸ್ಕೆ ಮ್ಯಾನೇಜ್ಮೆಂಟ್ ತನ್ನ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)
ಸುರೇಶ್ ರೈನಾ ಬಳಿಕ ಸಿಎಸ್ಕೆ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಐಪಿಎಲ್ನಿಂದ ಹಿಂದೆ ಸರಿಯುವ ಸಾಧ್ಯತೆ