More

    ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!

    ಕೊಲ್ಲಂ: ವಿಷಕಾರಿ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದ ಪ್ರಕರಣ ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆರಂಭದಲ್ಲಿ ಕೇವಲ ಹಾವು ಕಚ್ಚಿ ಸಾವಿಗೀಡಾಗಿದ್ದಾಳೆ ಎಂದು ನಂಬಲಾಗಿದ್ದ ಪ್ರಕರಣದಲ್ಲಿ ವಿಷಕಾರಿ ಮನಸ್ಥಿತಿಯುಳ್ಳ ಪತಿ ಸಿಕ್ಕಿ ಬೀಳಲು ಕಾರಣವಾದಂತಹ ಪ್ರಮುಖ ಸಂಶಯಗಳಿವು.

    ಇದನ್ನೂ ಓದಿ: ಅನ್ನ, ನೀರಿಲ್ಲದೇ ಸುಮಾರು 76 ವರ್ಷ ಬದುಕಿದ್ದ ನಿಗೂಢ ಯೋಗಿ ನಿಧನ

    ಪತ್ನಿ ಸತ್ತರೂ ಬಾಡದ ಮುಖ
    ಉತ್ತರಾ ಹಾವಿನ ಕಡಿತಕ್ಕೆ ಸತ್ತು ಬಿದ್ದಿದ್ದಾಗ ಆಕೆಯ ಸಹೋದರ ವಿಷ್ಣು ಹಾವಿಗಾಗಿ ಬೆಡ್​ರೂಮಿನಲ್ಲಿ ಹುಡುಕಾಡುವಾಗ ಆರೋಪಿ ಸೂರಜ್ ಮುಖದಲ್ಲಿ ದುಗುಡ ಇಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಬೆಡ್​ನ ಕೆಳಗೆ ವಿಷ್ಣು ಹುಡುಕಾಡುವಾಗ ಹಾವು ಬೀರಿನ ಅಡಿಯಿಂದ ಹೊರೆಗೆ ಹೋಯಿತು ಎಂದಿದ್ದಾನೆ. ಬಳಿಕ ವಿಷ್ಣು ಅದನ್ನು ಅಲ್ಲಿಯೇ ಸಾಯಿಸಿದ್ದಾನೆ. ಇದಲ್ಲದೇ ವಿಷ್ಣುನೇ ಉತ್ತರಾಳನ್ನು ಕೊಲ್ಲಲು ಯತ್ನಿಸಿದ ಎಂತಲೂ ಸೂರಜ್​ ಆರೋಪಿಸಿದ್ದ.

    ಸೂರಜ್​ಗೆ ಕಡಿಯದ ಹಾವು
    ಮನೆಯ ಸಮೀಪದಲ್ಲಿ ಹಾವಿನ ಹುತ್ತ ಅಥವಾ ಖಾಲಿ ಜಾಗವೇನಾದರೂ ಇದಿದ್ದರೆ ಸಂಬಂಧಿಕರಿಗೆ ಸೂರಜ್​ ಮೇಲೆ ಅನುಮಾನ ಬರುತ್ತಿರಲಿಲ್ಲ. ಆದರೆ, ಕಿಟಕಿ ಸಮೀಪವೇ ಮಲಗಿದ್ದ ಸೂರಜ್​ಗೆ ಹಾವು ಕಡಿಯದೇ ಪತ್ನಿ ಉತ್ತರಾಗೆ ಕಚ್ಚಿತ್ತೆಂಬುದು ಅನುಮಾನಕ್ಕೆ ಕಾರಣವಾಗಿತ್ತು. ಇದಲ್ಲದೇ ಉತ್ತರಾ ತಾಯಿ ಕಿಟಕಿ ಮುಚ್ಚಿತ್ತು ಎಂದರೆ, ಸೂರಜ್​ ಕಿಟಕಿಯಿಂದಲೇ ಹಾವು ಬತ್ತೆಂದು ಹೇಳಿದ್ದಾನೆ.

    ಇದನ್ನೂ ಓದಿ: ಫೋಟೋದಲ್ಲಿರೋ ಬಾಲಕಿ ಬಾಲಿವುಡ್​ನ ಬೋಲ್ಡ್​ ಬ್ಯೂಟಿ: ಈಕೆಗಿದೆ ಕರ್ನಾಟಕದ ನಂಟು!

    ಸ್ನೇಹಿತರೊಟ್ಟಿಗೆ ಮಂದಹಾಸ ಬೀರಿದ್ದ ಸೂರಜ್​
    ಉತ್ತರಾ ಸಾವಿನ ಬಳಿಕ ಸೂರಜ್​ನನ್ನು ನೋಡಲು​ ಸ್ನೇಹಿತರು ಮನೆಗೆ ಬಂದಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಕುಳಿತು ಸ್ನೇಹಿತರೊಂದಿಗೆ ಹರಟುತ್ತಾ ಸೂರಜ್​ ನಗು ಬೀರುತ್ತಿದ್ದುದ್ದನ್ನು ಸಂಬಂಧಿಕರು ಗಮನಿಸಿದ್ದಾರೆ. ಬಳಿಕ ಈ ಬಗ್ಗೆ ವಾಗ್ವಾದ ನಡೆದಿದ್ದರಿಂದ ಮಗ ಧ್ರುವನೊಂದಿಗೆ ಅಡೂರ್​ನಲ್ಲಿರುವ ತನ್ನ ಮನೆಗೆ ಬರಲು ಯತ್ನಿಸಿದ್ದಾನೆ. ಇದರ ನಡುವೆ ಸೂರಜ್​ ಉತ್ತರಾಳ ಚಿನ್ನಾಭರಣವನ್ನು ಲಾಕರ್​ನಿಂದ ತೆಗೆದುಕೊಂಡಿರುವುದು ಸಂಬಂಧಿಕರಿಗೆ ತಿಳಿದಿದೆ. ಪೊಲೀಸರು ಸಹ ಸೂರಜ್​ ಮನೆಯಲ್ಲಿ 12 ಸವರನ್​ ಚಿನ್ನವನ್ನು ಪತ್ತೆಹಚ್ಚಿದ್ದಾಗ, ಅದನ್ನು ಅವರಿಗೆ ಒಪ್ಪಿಸಲು ಸೂರಜ್​ ನಿರಾಕರಿಸಿದ್ದಾನೆ.

    ಉತ್ತರಾಗೆ ಚಿಕಿತ್ಸೆ ಕೊಡಿಸಲು ವಿಳಂಬ
    ಮಾರ್ಚ್​ ಒಂದರಂದು ಹಾವು ಸೂರಜ್​ ಮನೆಯಲ್ಲಿ ಪತ್ತೆಯಾಗಿದೆ. ಎರಡನೇ ಮಹಡಿಯಲ್ಲಿದ್ದ ತನ್ನ ಮೊಬೈಲ್​ ಫೋನ್​ ಅನ್ನು ತರಲು ಉತ್ತರಾಗೆ ಹೇಳಿದ್ದಾನೆ. ಈ ವೇಳೆ ಹಾವು ನೋಡಿ ಉತ್ತರಾ ಭಯಭೀತಳಾಗಿ ಬಂದು ಪತಿಗೆ ಹೇಳಿದ್ದಾಳೆ. ಬಳಿಕ ಸೂರಜ್​ ಹಾವನ್ನು ಹಿಡಿದು ಗೋಣಿ ಚೀಲದಲ್ಲಿ ಹಾಕಿಕೊಂಡು ದೂರಷ್ಟು ತೆಗೆದುಕೊಂಡು ಹೋಗಿದ್ದಾನೆ. ಉತ್ತರಾ ಈ ವಿಚಾರವನ್ನು ಪಾಲಕರಿಗೂ ತಿಳಿಸಿದ್ದಾಳೆ.

    ಇದನ್ನೂ ಓದಿ: ರಕ್ತದಾನ ಮಾಡುವುದರಿಂದ ಮನಸ್ಸು ಕ್ರಿಯಾಶೀಲವಾಗಲಿದೆಯೆಂದ ರೆಡ್‌ಕ್ರಾಸ್ ಸಂಸ್ಥೆಯ ಜನಸಂಪರ್ಕ ಅಧಿಕಾರಿ

    ಉತ್ತರಾಗೆ ಹಾವು ಕಡಿದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾರ್ಚ್​ 2 ರಂದು ಆಕೆಯ ಸಹೋದರನಿಗೆ ಸೂರಜ್​ ಮಾಹಿತಿ ನೀಡಿದ್ದಾನೆ. ಅಲ್ಲದೆ, ಆಕೆಯ ಪಾಲಕರಿಗೆ ತಿಳಿಸಿದಂತೆ ಹೇಳಿದ್ದಾನೆ. ಅಲ್ಲದೆ, ಹತ್ತಿರದಲ್ಲೇ ಅನೇಕ ಆಸ್ಪತ್ರೆಗಳಿದ್ದರು ಆಕೆಯನ್ನು ಬೇಗ ದಾಖಲಿಸಲು ವಿಳಂಬ ನೀತಿ ಅನುಸರಿಸಿದ್ದು ಸಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಎಲ್ಲ ಸಂಶಯಗಳಿಂದ ಸೂರಜ್​ ಮೇಲೆ ಪೊಲೀಸರ ಕಣ್ಣು ಬೀಳಲು ಕಾರಣವಾಗಿ ಕೊನೆಗೆ ಪ್ರಕರಣದ ಕರಾಳತೆಯೇ ಬಿಚ್ಚಿಕೊಂಡು ಪತಿ ಸೂರಜ್​ ಈಗ ಪೊಲೀಸರ ಅತಿಥಿಯಾಗಿದ್ದಾನೆ. (ಏಜೆನ್ಸೀಸ್​)

    5 ತಿಂಗಳು ಸಂಚು ರೂಪಿಸಿದ, ಹಾವಿನಿಂದ 2 ಬಾರಿ ಕಚ್ಚಿಸಿ ಪತ್ನಿಯ ಕೊಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts