More

    ಮೋದಿ ಮತ್ತೆ ಪ್ರಧಾನಿಯಾಗಲು ಎಚ್‌ಡಿಕೆ ಬೆಂಬಲಿಸಿ

    ಸಾಲಿಗ್ರಾಮ: ದೇಶದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲು ರಾಜ್ಯದಿಂದ ಹೆಚ್ಚು ಮೈತ್ರಿ ಸಂಸದರನ್ನು ಆರಿಸಬೇಕು. ಈ ನಿಟ್ಟಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಮತದಾರರು ಬೆಂಬಲಿಸಬೇಕು ಎಂದು ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಮನವಿ ಮಾಡಿದರು.


    ತಾಲೂಕಿನ ಹರದನಹಳ್ಳಿಯಲ್ಲಿ ಮಾಜಿ ಮುಡಾ ಅಧ್ಯಕ್ಷ ವಿಜಯಕುಮಾರ್ ಅವರ ಮನೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿರುದ್ಯೋಗಿಗಳು, ಬಡವರು, ಕಾರ್ಮಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು. ಅವರೊಂದಿಗೆ ಹೊರದೇಶಗಳಿಗೆ ಪ್ರವಾಸ ಹೋದ ಸಂದರ್ಭದಲ್ಲಿ ಈ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದರು. ಕಾರಣಾಂತರಗಳಿಂದ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಆದರೆ ಈಗ ಅಂತಹದ್ದೇ ಒಂದು ವೇದಿಕೆ ಸಿದ್ಧವಾಗಿದ್ದು, ಲೋಕಸಭಾ ಸದಸ್ಯರನ್ನಾಗಿ ಎಚ್‌ಡಿಕೆ ಅವರನ್ನು ಆಯ್ಕೆ ಮಾಡಿದರೆ ದೇಶದ ಕೃಷಿ ಸಚಿವರಾಗುವುದು ಖಚಿತ ಎಂದರು.
    ಬೆಂಗಳೂರು ಗ್ರಾಮಾಂತರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪರವಾಗಿಯೂ ಮತಯಾಚನೆ ಮಾಡಿದ್ದೇನೆ. ಅಲ್ಲಿ ಅವರ ಗೆಲುವಿಗೆ ಒಳ್ಳೆಯ ವಾತಾವರಣ ಇದೆ. ಅದೇ ರೀತಿ ಇಲ್ಲಿಯೂ ಮತದಾರರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದರು.

    ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಮಿರ್ಲೇ ಅಣ್ಣೇಗೌಡ, ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್‌ಕುಮಾರ್, ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಜಿಪಂ ಮಾಜಿ ಸದಸ್ಯರಾದ ಅಮಿತ್ ದೇವರಹಟ್ಟಿ, ಸವಿತಾ ವಿಜಯ್‌ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಮಧುಚಂದ್ರ, ಜೆಡಿಎಸ್ ತಾಲೂಕು ವಕ್ತಾರ ರಮೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೋಮಣ್ಣ, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ರಾಮೇಗೌಡ, ಜೆಡಿಎಸ್ ಮುಖಂಡರಾದ ಮಿರ್ಲೆ ರಾಜೀವ್, ರಾಜೇಶ್, ನಿಂಗಪ್ಪ, ಅನಂತ್, ಮುದುಗುಪ್ಪೆ ಕುಮಾರ್, ಸತೀಶ್, ಕೃಷ್ಣೇಗೌಡ, ರವಿ, ಅಂಕನಹಳ್ಳಿ ಶಿವಣ್ಣ, ಮಹೇಶ್, ಗೊಪಾಲ್, ಮೈಸೂರು ಚಂದ್ರಣ್ಣ ಪ್ರದೀಪ್, ಮಂಜು ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts