More

    ಭೂಮಿಗೆ ಅತಿ ಹತ್ತಿರದಲ್ಲಿ ವಿಮಾನ ಹಾರಿದ್ದೇ ನಿಗೂಢ ಶಬ್ದಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    ಆನೇಕಲ್: ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಕೇಳಿಬಂದ ನಿಗೂಢ ಶಬ್ದಕ್ಕೆ ಸೂಪರ್‌ಸಾನಿಕ್ ವಿಮಾನವೇ ಕಾರಣ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

    ಕರ್ನಾಟಕದ ಗಡಿ ಬಿದರಗುಪ್ಪೆ ಬಳಿ ತೀರ ಹತ್ತಿರ ಭೂಮಿಗೆ ಬಂದಿದ್ದ ವಿಮಾನವೇ ಈ ಭಾರಿ ಸಪ್ಪಳಕ್ಕೆ ಕಾರಣ ಎಂದು ಆ ಸಂದರ್ಭದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರಾದ ನರೇಂದ್ರಬಾಬು ತಿಳಿಸಿದ್ದಾರೆ.

    ಇದನ್ನೂ ಓದಿ ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ

    ಬಿದರಗುಪ್ಪೆ ಮತ್ತು ಬೇಗೇನಹಳ್ಳಿ ಮಧ್ಯೆ ವೇಗವಾಗಿ ಭೂಮಿಯತ್ತ ವಿಮಾನ ಬಂದಿತ್ತು. ಭೂಮಿಯ ಹತ್ತಿರ ಬರುತ್ತಿದ್ದಂತೆ ಏಕಾಏಕಿ ಟೇಕ್‌ಆಫ್ ಆಯಿತು. ಈ ಸಂದರ್ಭದಲ್ಲಿ ದಟ್ಟ ಹೊಗೆ ಮತ್ತು ಭಾರಿ ಶಬ್ದ ಹೊರಹೊಮ್ಮಿ ಭೂಮಿಗೆ ಜೋರಾಗಿ ಬಡಿದಿದೆ ಎಂದು ವಿವರಿಸಿದ್ದಾರೆ.

    ಆ ಸಂದರ್ಭದಲ್ಲಿ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರು ಕೂಡ ಭಯಭೀತರಾದರು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ವಿಮಾನ ಆಕಾಶದೆತ್ತರಕ್ಕೆ ಹಾರಿ ಕಣ್ಮರೆಯಾಯಿತು ಎಂದು ಪ್ರತ್ಯಕ್ಷದರ್ಶಿ ನರೇಂದ್ರಬಾಬು ‘ವಿಜಯವಾಣಿ’ಯ ಸೋದರ ಸಂಸ್ಥೆ ‘ದಿಗ್ವಿಜಯ ನ್ಯೂಸ್’ಗೆ ತಿಳಿಸಿದ್ದಾರೆ.

    ಇದನ್ನೂ ಓದಿ ಅಸಾಧ್ಯ ಎಂದು ಸರ್ಕಾರವೇ ಕೈಚೆಲ್ಲಿದಾಗ, ಈ ಅಪ್ಪ-ಮಗ ಮಾಡಿ ತೋರಿಸಿದರೊಂದು ಅದ್ಭುತ!

    ಮನೆಮನೆಗಳ ಆಹಾರೋದ್ಯಮಕ್ಕೆ 10,000 ಕೋಟಿ ರೂಪಾಯಿ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts