More

    ಕುಸಿದ ಎನ್.ಹೊಸೂರು ಸೇತುವೆ

    ಸಿರವಾರ: ಅಧಿಕ ಮಳೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ತಾಲೂಕಿನ ಎನ್.ಹೊಸೂರು ಗ್ರಾಮದ ಸೇತುವೆ ಭಾನುವಾರ ಬೆಳಗ್ಗೆ ಕುಸಿದಿದೆ. 2-3 ದಿನಗಳಿಂದ ಮಳೆ ಸುರಿಯುತ್ತಿದ್ದು ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ನೀರಿನ ಪ್ರವಾಹ ಹೆಚ್ಚಾಗಿ ನುಗುಡೋಣಿ-ಎನ್.ಹೊಸೂರು ಮಾರ್ಗದ ಸೇತುವೆ ಕುಸಿದಿದ್ದು, ನುಗೋಡೊಣಿ, ಸಿದ್ದಗರ್ಚ್ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ವರೆಗೆ ಅಧಿಕಾರಿಗಳು ಭೇಟಿ ನೀಡಿಲ್ಲ. ಸದ್ಯಕ್ಕೆ ತುಂಗಭದ್ರಾ ಮುಖ್ಯ ಕಾಲುವೆ ಪಕ್ಕದ ರಸ್ತೆಯ ಮೂಲಕ ವಾಹನಗಳು ಸಂಚರಿಸುತ್ತಿವೆ.

    ಮನೆಗೆ ನುಗ್ಗಿದ ನೀರು: ತಾಲೂಕಿನ ಬಾಗಲವಾಡ ಗ್ರಾಮದ ಯಲ್ಲಮ್ಮ ನಾಗರಾಜ ದಾಸರ ಮನೆಗೆ ಮಳೆ ನೀರು ನುಗ್ಗಿ, ಸಾಮಗ್ರಿಗಳು ನಷ್ಟಕ್ಕೀಡಾಗಿವೆ. 3 ದಿನಗಳಿಂದ ಈ ಕುಟುಂಬದ ಜನ ಬೀರಲಿಂಗೇಶ್ವರ ದೇವಸ್ಥಾನದ ಸಂಸ್ಕೃತ ಭವನದಲ್ಲಿ ವಾಸ ಮಾಡುತ್ತಿದ್ದಾರೆ. ಗಮನಕ್ಕೆ ತಂದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥ ಹುಸೇನ್ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts