More

    ಸತತ 2ನೇ ಬಾರಿ ಕೋರಂ ಕೊರತೆಯಿಂದ ನಡೆಯದ ಜಿಪಂ ಸಭೆ

    ಚಿಕ್ಕಮಗಳೂರು: ಜಿಪಂ ಸಾಮಾನ್ಯ ಸಭೆ ಎರಡನೇ ಬಾರಿ ಕೋರಂ ಕೊರತೆ ಕಾರಣ ಅನಿಧಿಷ್ಟ ಅವಧಿ ಮುಂದಕ್ಕೆ ಹೋಗಿದ್ದು, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರ ರಾಜೀನಾಮೆ ಪ್ರಹಸನ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ.

    ಅ. 20ರಂದು ಕರೆದಿದ್ದ ಸಾಮಾನ್ಯ ಸಭೆಗೆ ಪಕ್ಷದ ಸದಸ್ಯರು ಗೈರಾಗಿದ್ದರಿಂದ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ನ. 2ಕ್ಕೆ ಮುಂದೂಡಿದ್ದರು. ಈ ನಡುವೆ ಎಲ್ಲ ಸದಸ್ಯರಿಗೂ ಪತ್ರ ಬರೆದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಾಮಾನ್ಯ ಸಭೆಗೆ ಹಾಜರಾಗಿ ಸಹಕರಿಸಬೇಕು ಎಂದು ಮನವಿ ಮಾಡಿದ್ದರು. ಎರಡು ದಿನಗಳಿಂದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಜಿಪಂ ಸದಸ್ಯರಿಗೆ ಕರೆ ಮಾಡಿ ಸಾಮಾನ್ಯ ಸಭೆಗೆ ಹಾಜರಾಗಬೇಕು ಎಂದು ಅಧ್ಯಕ್ಷರ ಪರವಾಗಿ ಮನವಿ ಮಾಡಿದ್ದರು.

    ಮಂಗಳವಾರ ಕಾಂಗ್ರೆಸ್ ಪಕ್ಷದ ಆರು ಸದಸ್ಯರನ್ನು ಹೊರತುಪಡಿಸಿದರೆ ಉಪಾಧ್ಯಕ್ಷರೂ ಸೇರಿದಂತೆ ಎಲ್ಲ ಸದಸ್ಯರು ಸಾಮಾನ್ಯ ಸಭೆಯಿಂದ ದೂರ ಉಳಿದರು. 11.15ಕ್ಕೆ ಸಭಾಂಗಣಕ್ಕೆ ಆಗಮಿಸಿದ ಅಧ್ಯಕ್ಷರು, ಕೋರಂ ಕೊರತೆಯ ಕಾರಣ ಅರ್ಧ ಗಂಟೆ ಸಭೆಯನ್ನು ಮುಂದೂಡಿದರು. ಮತ್ತೆ ಸಭೆ ಸೇರಿದಾಗ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಹೀಗಾಗಿ ಅನಿರ್ಧಿಷ್ಟ ಅವಧಿವರೆಗೆ ಸಭೆ ಮುಂದೂಡಿದರು. ಪಕ್ಷದ ಸೂಚನೆ ಪ್ರಕಾರ ಬಿಜೆಪಿಯ ಎಲ್ಲ ಸದಸ್ಯರು ಗೈರಾಗಿದ್ದರು ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts