More

    ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಸುಸ್ತಾಗಿ ಅಲ್ಲೇ ಮಲಗಿದ ಅಜ್ಜಿ!

    ಕೋಲಾರ: ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ವಯೋವೃದ್ಧರು ಎಂಬ ಭೇದವೂ ಇದ್ದಂತಿಲ್ಲ. ಏಕೆಂದರೆ ಇಲ್ಲೊಬ್ಬರು ಅಜ್ಜಿ ಖಾತೆ ಬದಲಾವಣೆಗೆ ಅಲೆದಾಡಿ ಸುಸ್ತಾಗಿ ಕೊನೆಗೆ ಅಲ್ಲೇ ಮಲಗಿ ನರಳಾಡುವಂತಾಗಿದೆ.

    ಇಂಥದ್ದೊಂದು ದಯನೀಯ ಪ್ರಕರಣ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಚೇರಿಯಲ್ಲಿ ನಡೆದಿದೆ. ಶ್ರೀನಿವಾಸಪುರ ತಾಲೂಕಿನ ಹೊದಲಿ ಗ್ರಾಮದ ನರಸಮ್ಮ ಎಂಬಾಕೆಯೇ ಸಂತ್ರಸ್ತೆ. ಖಾತೆ ಬದಲಾವಣೆ ವಿಚಾರವಾಗಿ ಅಧಿಕಾರಿಗಳು ವಿಳಂಬಧೋರಣೆ ತೋರುತ್ತಿರುವುದರಿಂದ ಈ ಅಜ್ಜಿ ಇಂಥದ್ದೊಂದು ದುರ್ಗತಿ ಅನುಭವಿಸುವಂತಾಗಿದೆ.

    ತಹಶೀಲ್ದಾರ್ ಶರೀನ್ ತಾಜ್ ಅವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಇಂದು ತಾಲೂಕು ಕಚೇರಿಗೆ ಭೇಟಿ ನೀಡಿದ ಕೋಲಾರ ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾಗೆ ಮನವಿ ಮಾಡಿಕೊಂಡಿದ್ದು, ಅವರು ತಹಶೀಲ್ದಾರ್ ಶರೀನ್ ತಾಜ್ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಸುಸ್ತಾಗಿ ಅಲ್ಲೇ ಮಲಗಿದ ಅಜ್ಜಿ!

    ರಸ್ತೆ ಪಕ್ಕ ನಿಂತಿದ್ದ ಕಾರಿನ ಮೇಲೇ ಮಗುಚಿ ಬಿದ್ದ ಲಾರಿ, ಕಾರಲ್ಲಿದ್ದ ವ್ಯಕ್ತಿ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts