ಉತ್ತರಪ್ರದೇಶ: ಇಲ್ಲೊಬ್ಬ ಪೊಲೀಸ್ ಅಧಿಕಾರಿ, ರೈಫಲ್ ಒಳಗೆ ಗುಂಡು ಲೋಡ್ ಮಾಡಲುಲ ವಿಫಲವಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ವಿಷಯ ಬಹಿರಂಗವಾಗಿದ್ದು ಪೊಲೀಸ್ ಅಧಿಕಾರಿಗಳು ಅಚಾನಕ್ ಆಗಿ ತನಿಖೆಗೆ ಬಂದಿದ್ದರಿಂದ. ಇಲ್ಲವಾದಲ್ಲಿ ಈ ವಿಷಯ ಇನ್ನೆಷ್ಟು ವರ್ಷಗಳ ಕಾಲ ನಿಗೂಢವಾಗಿಯೇ ಉಳಿಯುತ್ತಿತ್ತೋ ಏನೋ!
ಖಲೀಲಾಬಾದ್ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿ), ಬಸ್ತಿ ಶ್ರೇಣಿ, ಆರ್ಕೆ ಭಾರದ್ವಾಜ್, ಹಠಾತ್ ಆಗಿ ಬಂದಿದ್ದು ತಪಾಸಣೆಯ ಸಂದರ್ಭದಲ್ಲಿ ರೈಫಲ್ ಅನ್ನು ಲೋಡ್ ಮಾಡಲು ಸಬ್ ಇನ್ಸ್ಪೆಕ್ಟರ್ಗೆ ಕೇಳಿದ್ದಾರೆ. ಆಗ ಇವರು ಗನ್ ತೆಗೆದುಕೊಂಡು ಗುಂಡನ್ನು ರೈಫಲ್ನ ಮುಂಭಾಗದ ನಳಿಗೆಯಿಂದ ಲೋಡ್ ಮಾಡಲು ಪ್ರಯತ್ನಿಸಿದ್ದಾರೆ.
ಕಡೆಗೆ ಈ ದುರವಸ್ಥೆಯನ್ನು ನೋಡಲಾಗದೇ ಐಜಿ, ಖುದ್ದಾಗಿ ರೈಫಲ್ ಹೇಗೆ ಲೋಡ್ ಮಾಡುವುದು ಎಂದು ಹೇಳಿಕೊಟ್ಟಿದ್ದಾರೆ.ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳಿಂದ ಯೋಗಿ ಸರರ್ಕಾರಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.
योगी जी की पुलिस को बंदूक में गोली डालना भी नहीं आता!
— Samajwadi Party (@samajwadiparty) December 28, 2022
यूपी पुलिस बंदूक की नली से डाल रही गोली, चरम पर अज्ञानता।
भाजपा सरकार में गरीबों और निर्दोषों का उत्पीड़न करने वाली अनुशासनहीन पुलिस के एसआई को बंदूक चलाना भी नहीं आता, शर्मनाक।
ऐसे पुलिसकर्मियों से बेहतर होगी पुलिस फोर्स? pic.twitter.com/fbCMy5dmsy