ಭುವನೇಶ್ವರ್: ಅನಿರೀಕ್ಷಿತವಾಗಿ ಪರಿಚಯವಾದ ಸ್ನೇಹಿತನನ್ನು ಭೇಟಿ ಮಾಡಲು ಆತನ ಮನೆಗೆ ಬಂದ ಯುವತಿ ಲಾಕ್ಡೌನ್ ಕಾರಣದಿಂದಾಗಿ ಅನೇಕ ತಿಂಗಳವರೆಗೆ ಅಲ್ಲಿಯೇ ಉಳಿಯುವಂತಾಯಿತು. ಬಹುದಿನಗಳವರೆಗೂ ಒಂದೇ ಮನೆಯಲ್ಲಿ ಒಟ್ಟಿಗೆ ಇದ್ದ ಸ್ನೇಹಿತರು, ವ್ಯಾಲೆಂಟೈನ್ಸ್ ದಿನದಂದು ಸತಿ-ಪತಿಗಳಾಗಿದ್ದು, ಅವರಿಬ್ಬರ ರೋಚಕ ಲವ್ ಸ್ಟೋರಿಯ ರಹಸ್ಯ ಬಯಲಾಗಿದೆ.
ಹೌದು. ಮಹಾಮಾರಿ ಕರೊನಾ ವೈರಸ್ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಆದರೆ, ಅದಿನ್ನು ಆರಂಭಿಕ ಹಂತದಲ್ಲಿತ್ತು. ಮುಂದೊಂದು ದಿನ ಇಡೀ ದೇಶವೇ ಲಾಕ್ ಆಗುತ್ತದೆ ಎಂಬ ಕಲ್ಪನೆಯು ಸಹ ಜನರಿಗೆ ಇರಲಿಲ್ಲ. ಹೀಗಿರುವಾಗ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಣೆ ಮಾಡಲು ಇನ್ನು ನಾಲ್ಕು ದಿನ ಬಾಕಿ ಇರುತ್ತದೆ. ಈ ವೇಳೆ ಒಡಿಶಾದ ಸುಂದರಗಢ ಜಿಲ್ಲೆಯ ರಾಜ್ಗಂಗ್ಪುರ್ ಬ್ಲಾಕ್ ಅಡಿಯಲ್ಲಿ ಬರುವ ಮಹುಲ್ದಿಹಿ ಗ್ರಾಮದ ನಿವಾಸಿ ನಮಿತಾ ಮಾಜಿ, ಅದೇ ಜಿಲ್ಲೆಯ ಕುತ್ರಾ ಬ್ಲಾಕ್ ಅಡಿಯಲ್ಲಿರುವ ಪಂಚಾರ ಗ್ರಾಮದ ಸ್ನೇಹಿತ ಬಾಬುಲಾಲ್ ಮಾಜಿ ಮನೆಗೆ ತೆರಳುತ್ತಾಳೆ.
ಇದನ್ನೂ ಓದಿರಿ: PHOTOS| ಡಿಕೆಶಿ ಪುತ್ರಿ ಐಶ್ವರ್ಯಾ ಅದ್ಧೂರಿ ವಿವಾಹದ ಎಕ್ಸ್ಕ್ಲೂಸಿವ್ ಫೋಟೋಗಳು..!
ಮುಂದೇನಾಯ್ತು ಎಂದು ಹೇಳುವುದಕ್ಕೂ ಮುನ್ನ ಒಂದು ಸಣ್ಣ ಫ್ಲ್ಯಾಶ್ಬ್ಯಾಕ್ ಹೇಳಿ ಬಿಡುತ್ತೇನೆ. ಏನೆಂದರೆ, ನಮಿತಾ ಎರಡು ವರ್ಷಗಳ ಹಿಂದೆ ಪಂಚಾರದಲ್ಲಿ ನಡೆದ ಮದುವೆಯೊಂದಕ್ಕೆ ಆಗಮಿಸಿರುತ್ತಾಳೆ. ಅದೇ ಮದುವೆಗೆ ಬಾಬುಲಾಲ್ ಸಹ ಭೇಟಿ ನೀಡಿರುತ್ತಾನೆ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಪರಸ್ಪರ ಮೊಬೈಲ್ ನಂಬರ್ ಸಹ ವಿನಿಮಯ ಆಗುತ್ತದೆ. ಅಂದಿನಿಂದ ಒಂದು ವರ್ಷಗಳವರೆಗೆ ಇಬ್ಬರು ನಿರಂತರವಾಗಿ ಫೋನ್ ಸಂಪರ್ಕದಲ್ಲಿ ಇರುತ್ತಾರೆ.
ಈಗ ಮತ್ತೆ ಹಿಂದಿನ ಕತೆಗೆ ಮರಳೋಣ… ಬಾಬುಲಾಲ್ ಮನೆಗೆ ನಮಿತಾ ತೆರಳುತ್ತಾಳೆ. ಅದಕ್ಕೂ ಮುನ್ನ ಬಾಬುಲಾಲ್ ತನ್ನ ಮನೆಗೆ ಆಕೆಯನ್ನು ಆಹ್ವಾನಿಸಿರುತ್ತಾನೆ. ಹೀಗಾಗಿ ಆಕೆ ಹೋಗಿರುತ್ತಾಳೆ. ಬಾಬುಲಾಲ್ ಆತಿಥ್ಯ ಸ್ವೀಕರಿಸುವ ನಮಿತಾ ಮತ್ತೆ ತನ್ನ ಮನೆಗೆ ಹಿಂದಿರುಗಲು ಸಾಧ್ಯವಾಗುವುದಿಲ್ಲ. ಕಾರಣ ಅದೇ ದಿನ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗುತ್ತದೆ. ಅನಿವಾರ್ಯವಾಗಿ ಇಬ್ಬರು ಒಂದೇ ಮನೆಯಲ್ಲಿ ಇರಬೇಕಾಗುತ್ತದೆ. ಇಬ್ಬರ ಪರಿಚಯ ಈ ಸಮಯದಲ್ಲಿ ಅಗಾಧವಾದ ಪ್ರೀತಿಗೆ ತಿರುಗುತ್ತದೆ. ಒಟ್ಟಿಗೆ ಇದ್ದುದ್ದರಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅಚ್ಚಿಕೊಳ್ಳುತ್ತಾರೆ.
ಇದನ್ನೂ ಓದಿರಿ: ಮದುವೆಗು ಮುನ್ನ ಡಿಕೆಶಿ ಪುತ್ರಿ ಹಠ ಹಿಡಿದಿದ್ದೇಕೆ? ಕೊನೆಗೂ ತನ್ನ ಹಠ ಸಾಧಿಸಿದ ಐಶ್ವರ್ಯಾ!
ಇದಾದ ಬಳಿಕ ಇಬ್ಬರ ಪ್ರೀತಿಗೆ ಎರಡು ಕುಟುಂಬದವರು ಒಪ್ಪಿಗೆ ಸಹ ನೀಡುತ್ತಾರೆ. ಇದೇ ಖುಷಿಯಲ್ಲಿ ಇಬ್ಬರು ಕುಟುಂಬ, ಬಂಧು-ಬಳಗ, ಆಪ್ತರ ನಡುವೆ ವ್ಯಾಲೆಂಟೈನ್ಸ್ ದಿನದಂದೇ ಸಪ್ತಪದಿ ತುಳಿದಿದ್ದಾರೆ. ಲಾಕ್ಡೌನ್ನಿಂದ ಆರಂಭವಾದ ಪ್ರೀತಿಯ ಬೆಸುಗೆ, ಮದುವೆ ಬಂಧನವರೆಗೂ ಕರೆತಂದಿದೆ. ಇಬ್ಬರ ಬಾಳಲ್ಲಿ ಹೊಸ ಕ್ಷಣಗಳ ಆರಂಭವಾಗಿದ್ದು, ಮುಂದಿನ ಅವರಿಬ್ಬರ ಜೀವನ ಆನಂದಮಯವಾಗಿರಲಿ ಎಂದು ಹಿತೈಶಿಗಳು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್)
ಗಂಡನ ಕಾಮದಾಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ: 18 ಪುಟಗಳ ಡೆತ್ನೋಟ್ನಲ್ಲಿ ಪತಿಯ ಕಾಮದಾಟ ಬಯಲು!
ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!
ಭಾವಿ ಪತಿಗೆ ತನ್ನ ಮನೆಯಲ್ಲೇ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಅಲ್ಲೋಲ-ಕಲ್ಲೋಲ್ಲ!