More

    ಒಂದೇ ಮನೆಯಲ್ಲಿ ಲಾಕ್​: ವ್ಯಾಲೆಂಟೈನ್ಸ್​ ದಿನ ಬಯಲಾಯ್ತು ಯುವಕ-ಯುವತಿಯ ಲಾಕ್​ಡೌನ್​​ ರಹಸ್ಯ!

    ಭುವನೇಶ್ವರ್​: ಅನಿರೀಕ್ಷಿತವಾಗಿ ಪರಿಚಯವಾದ ಸ್ನೇಹಿತನನ್ನು ಭೇಟಿ ಮಾಡಲು ಆತನ ಮನೆಗೆ ಬಂದ ಯುವತಿ ಲಾಕ್​ಡೌನ್​ ಕಾರಣದಿಂದಾಗಿ ಅನೇಕ ತಿಂಗಳವರೆಗೆ ಅಲ್ಲಿಯೇ ಉಳಿಯುವಂತಾಯಿತು. ಬಹುದಿನಗಳವರೆಗೂ ಒಂದೇ ಮನೆಯಲ್ಲಿ ಒಟ್ಟಿಗೆ ಇದ್ದ ಸ್ನೇಹಿತರು, ವ್ಯಾಲೆಂಟೈನ್ಸ್​ ದಿನದಂದು ಸತಿ-ಪತಿಗಳಾಗಿದ್ದು, ಅವರಿಬ್ಬರ ರೋಚಕ ಲವ್​ ಸ್ಟೋರಿಯ ರಹಸ್ಯ ಬಯಲಾಗಿದೆ.

    ಹೌದು. ಮಹಾಮಾರಿ ಕರೊನಾ ವೈರಸ್​ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಆದರೆ, ಅದಿನ್ನು ಆರಂಭಿಕ ಹಂತದಲ್ಲಿತ್ತು. ಮುಂದೊಂದು ದಿನ ಇಡೀ ದೇಶವೇ ಲಾಕ್​ ಆಗುತ್ತದೆ ಎಂಬ ಕಲ್ಪನೆಯು ಸಹ ಜನರಿಗೆ ಇರಲಿಲ್ಲ. ಹೀಗಿರುವಾಗ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲು ಇನ್ನು ನಾಲ್ಕು ದಿನ ಬಾಕಿ ಇರುತ್ತದೆ. ಈ ವೇಳೆ ಒಡಿಶಾದ ಸುಂದರಗಢ ಜಿಲ್ಲೆಯ ರಾಜ್​ಗಂಗ್ಪುರ್​ ಬ್ಲಾಕ್​ ಅಡಿಯಲ್ಲಿ ಬರುವ ಮಹುಲ್ದಿಹಿ ಗ್ರಾಮದ ನಿವಾಸಿ ನಮಿತಾ ಮಾಜಿ, ಅದೇ ಜಿಲ್ಲೆಯ ಕುತ್ರಾ ಬ್ಲಾಕ್​ ಅಡಿಯಲ್ಲಿರುವ ಪಂಚಾರ ಗ್ರಾಮದ ಸ್ನೇಹಿತ ಬಾಬುಲಾಲ್​​ ಮಾಜಿ ಮನೆಗೆ ತೆರಳುತ್ತಾಳೆ.

    ಇದನ್ನೂ ಓದಿರಿ: PHOTOS| ಡಿಕೆಶಿ ಪುತ್ರಿ ಐಶ್ವರ್ಯಾ ಅದ್ಧೂರಿ ವಿವಾಹದ ಎಕ್ಸ್​ಕ್ಲೂಸಿವ್​ ಫೋಟೋಗಳು..!

    ಮುಂದೇನಾಯ್ತು ಎಂದು ಹೇಳುವುದಕ್ಕೂ ಮುನ್ನ ಒಂದು ಸಣ್ಣ ಫ್ಲ್ಯಾಶ್​ಬ್ಯಾಕ್​ ಹೇಳಿ ಬಿಡುತ್ತೇನೆ. ಏನೆಂದರೆ, ನಮಿತಾ ಎರಡು ವರ್ಷಗಳ ಹಿಂದೆ ಪಂಚಾರದಲ್ಲಿ ನಡೆದ ಮದುವೆಯೊಂದಕ್ಕೆ ಆಗಮಿಸಿರುತ್ತಾಳೆ. ಅದೇ ಮದುವೆಗೆ ಬಾಬುಲಾಲ್​ ಸಹ ಭೇಟಿ ನೀಡಿರುತ್ತಾನೆ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಪರಸ್ಪರ ಮೊಬೈಲ್​ ನಂಬರ್​ ಸಹ ವಿನಿಮಯ ಆಗುತ್ತದೆ. ಅಂದಿನಿಂದ ಒಂದು ವರ್ಷಗಳವರೆಗೆ ಇಬ್ಬರು ನಿರಂತರವಾಗಿ ಫೋನ್​ ಸಂಪರ್ಕದಲ್ಲಿ ಇರುತ್ತಾರೆ.

    ಈಗ ಮತ್ತೆ ಹಿಂದಿನ ಕತೆಗೆ ಮರಳೋಣ… ಬಾಬುಲಾಲ್​ ಮನೆಗೆ ನಮಿತಾ ತೆರಳುತ್ತಾಳೆ. ಅದಕ್ಕೂ ಮುನ್ನ ಬಾಬುಲಾಲ್​ ತನ್ನ ಮನೆಗೆ ಆಕೆಯನ್ನು ಆಹ್ವಾನಿಸಿರುತ್ತಾನೆ. ಹೀಗಾಗಿ ಆಕೆ ಹೋಗಿರುತ್ತಾಳೆ. ಬಾಬುಲಾಲ್​ ಆತಿಥ್ಯ ಸ್ವೀಕರಿಸುವ ನಮಿತಾ ಮತ್ತೆ ತನ್ನ ಮನೆಗೆ ಹಿಂದಿರುಗಲು ಸಾಧ್ಯವಾಗುವುದಿಲ್ಲ. ಕಾರಣ ಅದೇ ದಿನ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗುತ್ತದೆ. ಅನಿವಾರ್ಯವಾಗಿ ಇಬ್ಬರು ಒಂದೇ ಮನೆಯಲ್ಲಿ ಇರಬೇಕಾಗುತ್ತದೆ. ಇಬ್ಬರ ಪರಿಚಯ ಈ ಸಮಯದಲ್ಲಿ ಅಗಾಧವಾದ ಪ್ರೀತಿಗೆ ತಿರುಗುತ್ತದೆ. ಒಟ್ಟಿಗೆ ಇದ್ದುದ್ದರಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅಚ್ಚಿಕೊಳ್ಳುತ್ತಾರೆ.

    ಇದನ್ನೂ ಓದಿರಿ: ಮದುವೆಗು ಮುನ್ನ ಡಿಕೆಶಿ ಪುತ್ರಿ ಹಠ ಹಿಡಿದಿದ್ದೇಕೆ? ಕೊನೆಗೂ ತನ್ನ ಹಠ ಸಾಧಿಸಿದ ಐಶ್ವರ್ಯಾ!

    ಇದಾದ ಬಳಿಕ ಇಬ್ಬರ ಪ್ರೀತಿಗೆ ಎರಡು ಕುಟುಂಬದವರು ಒಪ್ಪಿಗೆ ಸಹ ನೀಡುತ್ತಾರೆ. ಇದೇ ಖುಷಿಯಲ್ಲಿ ಇಬ್ಬರು ಕುಟುಂಬ, ಬಂಧು-ಬಳಗ, ಆಪ್ತರ ನಡುವೆ ವ್ಯಾಲೆಂಟೈನ್ಸ್​ ದಿನದಂದೇ ಸಪ್ತಪದಿ ತುಳಿದಿದ್ದಾರೆ. ಲಾಕ್​ಡೌನ್​ನಿಂದ ಆರಂಭವಾದ ಪ್ರೀತಿಯ ಬೆಸುಗೆ, ಮದುವೆ ಬಂಧನವರೆಗೂ ಕರೆತಂದಿದೆ. ಇಬ್ಬರ ಬಾಳಲ್ಲಿ ಹೊಸ ಕ್ಷಣಗಳ ಆರಂಭವಾಗಿದ್ದು, ಮುಂದಿನ ಅವರಿಬ್ಬರ ಜೀವನ ಆನಂದಮಯವಾಗಿರಲಿ ಎಂದು ಹಿತೈಶಿಗಳು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)

    ಗಂಡನ ಕಾಮದಾಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ: 18 ಪುಟಗಳ ಡೆತ್​ನೋಟ್​ನಲ್ಲಿ ಪತಿಯ ಕಾಮದಾಟ ಬಯಲು!

    ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!

    ಭಾವಿ ಪತಿಗೆ ತನ್ನ ಮನೆಯಲ್ಲೇ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಅಲ್ಲೋಲ-ಕಲ್ಲೋಲ್ಲ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts