More

    ಹಾಸನಾಂಬೆ ದರ್ಶನ ವೇಳೆ ಕರೆಂಟ್​ ಶಾಕ್​: ಎದ್ನೋ ಬಿದ್ನೋ ಎಂದು ಓಡಿದ ಭಕ್ತರು, ತಳ್ಳಾಟದಿಂದ ಕೆಲವರಿಗೆ ಗಾಯ

    ಹಾಸನ: ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದು ಇಂದಿಗೆ 9ನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಭಕ್ತರು ನಿತ್ಯವೂ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇಂದು ಸಹ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇದರ ನಡುವೆ ಸರತಿ ಸಾಲಿನಲ್ಲಿ ನಿಂತಿದ್ದ ಕೆಲವರಿಗೆ ಕರೆಂಟ್​ ಶಾಕ್​ ಹೊಡೆದಿದ್ದು, ಇದರಿಂದ ದೇವಾಲಯದ ಆವರಣದಲ್ಲಿ ಕೆಲಕಾಲ ಗೊಂದಲ ವಾತಾವರಣ ಉಂಟಾಯಿತು.

    ದರ್ಶನದ ಸರತಿ ಸಾಲಿನಲ್ಲಿ ನಿಂತಿದ್ದ ಸಮಯದಲ್ಲಿ ಸುಮಾರು 20 ಮಂದಿಗೆ ವಿದ್ಯುತ್​ ಶಾಕ್​ ತಗುಲಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಸರದಿಯಲ್ಲಿ ನಿಂತಿದ್ದ ಭಕ್ತರು ಭಯಭೀತರಾಗಿ ಎದ್ನೋ-ಬಿದ್ನೋ ಅಂತ ಓಡಾಡಿದ್ದಾರೆ. ಅಲ್ಲದೆ, ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಒಂದೆಡೆ ಕರೆಂಟ್​ ಶಾಕ್​ನಿಂದ ಮತ್ತೊಂದೆಡೆ ಕಾಲ್ತುಳಿತದಿಂದ ಕೆಲ ಮಂದಿ ಗಾಯಗೊಂಡಿದ್ದಾರೆ.

    ಸಾಮಾನ್ಯ ಭಕ್ತರು ಧರ್ಮ ದರ್ಶನ ಸಾಲಿನಲ್ಲಿ ನಿಂತಿದ್ದಾಗ ಬ್ಯಾರಿಕೇಡ್​ ಕಂಬಿಯಲ್ಲಿ ಎರಡು-ಮೂರು ಬಾರಿ ಬಿಟ್ಟು ಬಿಟ್ಟು ಕರೆಂಟ್ ಶಾಕ್ ಹೊಡೆದಿದೆ ಎಂದು ಭಕ್ತರು ದೂರಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಂಬ್ಯುಲೆನ್ಸ್​ ಸಹಾಯದಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಅನ್ನೋ ಮಾಹಿತಿಯು ಇದೆ.

    ಈ ಘಟನೆಯ ಬೆನ್ನಲ್ಲೇ ಭಕ್ತರು ಹಾಸನ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಹಾಸನಾಂಬೆ ದರ್ಶನಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ. ಈ ವೇಳೆ ಸ್ವಯಂ ಸೇವಕರು ಭಕ್ತರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದಾದರೂ ಯಾರೂ ಕೂಡ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಈಗಲೂ ಭಕ್ತರಲ್ಲಿ ಆತಂಕ ಮುಂದುವರಿದಿದೆ.

    ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದು 9 ದಿನಕ್ಕೆ ಕಾಲಿಟ್ಟಿದ್ದು, ಇಂದು ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇದೆ. ಕೇವಲ 7 ದಿನಕ್ಕೆ ಕೋಟಿಗಟ್ಟಲೆ ಆದಾಯವೂ ಸಹ ಸಂಗ್ರಹವಾಗಿದೆ. ನವೆಂಬರ್​ 2ರಂದು ಬಾಗಿಲನ್ನು ತೆರೆಯಲಾಯಿತು. ಮೊದಲ ದಿನ ಭಕ್ತರ ದರ್ಶನಕ್ಕೆ ಅವಕಾಶ ಇರಲಿಲ್ಲ. ನ.3ರಿಂದ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸಾವಿರ ಸಂಖ್ಯೆಯಲ್ಲಿ ಭಕ್ತರು ಪ್ರತಿದಿನ ದರ್ಶನ ಪಡೆಯುತ್ತಿದ್ದಾರೆ.

    ಹಾಸನಾಂಬೆ ದೇವಸ್ಥಾನದ ಮುಂದೆ ಹೈಡ್ರಾಮ: ಡಿಸಿ ಸತ್ಯಭಾಮ ಜತೆ ಶಾಸಕ ಸ್ವರೂಪ್​ ಜಟಾಪಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts