More

    ಶ್ರೀರಂಗಪಟ್ಟಣದಲ್ಲಿ ಹನುಮಂತ ಪ್ರತ್ಯಕ್ಷ!

    ಶ್ರೀರಂಗಪಟ್ಟಣ: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ಕುರಿಗಾಹಿ ಹನುಮಂತ, ಪಟ್ಟಣದಲ್ಲಿ ಮಂಗಳವಾರ ಅನಿರೀಕ್ಷಿತವಾಗಿ ಕಾಣಿಸಿಕೊಂಡು ಅಭಿಮಾನಿಗಳು ಹಾಗೂ ಸಾರ್ವಜನಿಕರ ಜತೆ ಸೆಲ್ಫಿ ತೆಗೆಸಿಕೊಂಡನು.

    ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ಹನುಮಂತನ ಸ್ವಗ್ರಾಮವಾಗಿದ್ದು, ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶೈಕ್ಷಣಿಕ ಪ್ರವಾಸಕ್ಕೆಂದು ಸೋಮವಾರ ಶ್ರೀರಂಗಪಟ್ಟಣಕ್ಕೆ ಆಗಮಿಸಿ, ಖಾಸಗಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದರು. ಈ ನಡುವೆ, ಮೈಸೂರಿನಲ್ಲಿ ಇದ್ದ ಹನುಮಂತ ತನ್ನೂರಿನ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಶ್ರೀರಂಗಪಟ್ಟಣಕ್ಕೆ ಆಗಮಿಸಿರುವ ವಿಷಯ ತಿಳಿದು ರಾತ್ರಿಯೇ ಶ್ರೀರಂಗಪಟ್ಟಣಕ್ಕೆ ಆಗಮಿಸಿ ಅವರ ಜತೆ ವಾಸ್ತವ್ಯ ಹೂಡಿದ್ದನು. ಮಂಗಳವಾರ ಬೆಳಗ್ಗೆ ಮಕ್ಕಳ ಜತೆ ಉಪಾಹಾರ ಸೇವಿಸಿ, ಶ್ರೀರಂಗಪಟ್ಟಣ ಹಾಗೂ ತಾಲೂಕಿನ ಸುತ್ತಮುತ್ತ ಪ್ರವಾಸ ಕೈಗೊಂಡಿದ್ದನು.

    ಪಟ್ಟಣಕ್ಕೆ ಹನುಮಂತ ಆಗಮಿಸಿರುವ ಮಾಹಿತಿ ತಿಳಿದ ಕೆಲವು ಸಾರ್ವಜನಿಕರು ಆತನನ್ನು ಭೇಟಿ ಮಾಡಿ, ಸುತ್ತುವರಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಸ್ವಗ್ರಾಮದ ಮಕ್ಕಳೊಂದಿಗೆ ಬೆರೆತಿದ್ದ ಆತನ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts