ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂನಿಂದ ಪಾಲ್ಕ್ ಬೇಗೆ ತೆರಳಿದ್ದ ಭಾರತೀಯ ಮೀನುಗಾರಿಕೆ ದೋಣಿಗಳಿಗೆ ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿ ಕಲ್ಲುಗಳನ್ನು ತೂರಿದ್ದಾರೆ. ಈ ಘಟನೆಯಲ್ಲಿ 60 ದೋಣಿಗಳಿಗೆ ಹಾನಿಯುಂಟಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ ಎನ್ನಲಾಗಿದೆ.
ಕಳೆದ ರಾತ್ರಿ ಕಟ್ಚತೀವು ಬಳಿ ಮೀನು ಹಿಡಿಯುತ್ತಿರುವಾಗ, ಸುಮಾರು 25 ದೋಣಿಗಳ ಫಿಶಿಂಗ್ ನೆಟ್ಗಳನ್ನೂ ನೌಕಾಪಡೆಯ ಸಿಬ್ಬಂದಿ ಹಾನಿಗೊಳಿಸಿದ್ದಾರೆ. ಐದು ವೆಸೆಲ್ಗಳಲ್ಲಿ ಬಂದು ಕಲ್ಲು ತೂರಿದ್ದಾರೆ. ಆದರೆ ಈ ಘಟನೆಯಲ್ಲಿ ಯಾವ ಮೀನುಗಾರರಿಗೂ ಏಟು ಬಿದ್ದಿಲ್ಲ ಎಂದು ಮೀನುಗಾರರು ದೂರು ಸಲ್ಲಿಸಿರುವುದಾಗಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಸದನಿಂದ ರೇಪ್ ಆರೋಪಿಸಿ ಸುಪ್ರೀಂ ಕೋರ್ಟ್ ಮುಂದೆ ಬೆಂಕಿ ಹಚ್ಚಿಕೊಂಡರು!
ಶನಿವಾರ ರಾತ್ರಿ ಸುಮಾರು 556 ದೋಣಿಗಳು ಮೀನುಗಾರಿಕೆಗಾಗಿ ಪಾಲ್ಕ್ ಬೇಗೆ ತೆರಳಿದ್ದವು. ಅವುಗಳಲ್ಲಿ ಕೆಲವನ್ನು ಶ್ರೀಲಂಕಾದ ನೌಕಾ ಪಡೆ ಟಾರ್ಗೆಟ್ ಮಾಡಿದೆ ಎಂದು ರಾಮೇಶ್ವರಂನ ಮೀನುಗಾರರ ಸಂಘದ ಪ್ರತಿನಿಧಿ ಎಸ್.ಎಮೆರಿಟ್ ಹೇಳಿದ್ದಾರೆ. ಈ ತೆರನ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಳಜಿ ವಹಿಸಿ, ತಮ್ಮ ಜೀವನೋಪಾಯಕ್ಕೆ ಭದ್ರತೆ ಒದಗಿಸಬೇಕು ಎಂದು ಕೋರಿದ್ದಾರೆ. (ಏಜೆನ್ಸೀಸ್)
ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಕಾನೂನು: ಮೊದಲ ಹೆಜ್ಜೆ ಇಡುತ್ತಿದೆ ಈ ರಾಜ್ಯ!