More

    ಪ್ರೀತಿ, ವಿಶ್ವಾಸದ ಶಾಂತಿದೂತ ಶ್ರೀರಾಮ: ಕಿಮ್ಮನೆ ರತ್ನಾಕರ್

    ತೀರ್ಥಹಳ್ಳಿ: ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರತಿಷ್ಠಾಪನೆಯಿಂದ ದೇಶದಲ್ಲಿ ದ್ವೇಷ, ಅಸೂಯೆಗಳು ದೂರವಾಗಿ ಪರಸ್ಪರ ಪ್ರೀತಿ- ವಿಶ್ವಾಸಗಳೊಂದಿಗೆ ಶಾಂತಿ ನೆಲೆಸುವಂತಾಗಬೇಕು ಎಂಬುದೇ ಎಲ್ಲರ ಆಶಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
    ಪಟ್ಟಣದ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ನಂತರ ಮಾತನಾಡಿ, ರಾಮ ಎಲ್ಲರ ಪ್ರೀತಿಯ ದೇವರು. ಆತ ಯಾರನ್ನೂ ದ್ವೇಷ ಮಾಡುವಂತೆ ಪ್ರೇರೇಪಿಸುವುದಿಲ್ಲ ಎಂಬುದು ನಮ್ಮೆಲ್ಲರ ನಂಬಿಕೆ. ಅದೇ ಸದುದ್ದೇಶದಿಂದ ಇಲ್ಲಿನ ಕೋದಂಡರಾಮನ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ದೇವಸ್ಥಾನ ಜೀರ್ಣೋದ್ಧಾರಗೊಳಿಸಲಿಕ್ಕೂ ಪ್ರಯತ್ನಿಸುತ್ತೇವೆ ಎಂದರು.
    ಅರ್ಚಕ ನಾಗೇಶ ಭಟ್ಟ ಮಾತನಾಡಿ, ದೇವರ ಪ್ರೇರಣೆಯಂತೆ ಇಂದು ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಒಳ್ಳೆಯ ಪ್ರಯತ್ನ ನಡೆದಿದೆ. ಕಳೆದ ೬೬ ವರ್ಷಗಳಿಂದ ದೇವಸ್ಥಾನದಲ್ಲಿ ರಾಮನ ಸೇವೆ ಮಾಡುತ್ತಿದ್ದು, ಅಭಿವೃದ್ಧಿಗೆ ಸರ್ಕಾರದ ಅನುದಾನ ಬಂದರೆ ದೇವಸ್ಥಾನ ಇನ್ನಷ್ಟು ಪ್ರಸಿದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
    ಬೆಳಗ್ಗೆಯಿಂದ ನಡೆದ ಪೂಜೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪಕ್ಷದ ಮುಖಂಡರಾದ ಬಿ.ಕೆ.ವಾದಿರಾಜ್, ಡಿ.ಎಸ್.ವಿಶ್ವನಾಥ ಶೆಟ್ಟಿ, ಹಸಿರುಮನೆ ಮಹಾಬಲೇಶ್, ಎಚ್.ಬಿ.ಪದ್ಮನಾಭ್, ಬಿ.ಆರ್.ರಾಘವೇಂದ್ರ ಶೆಟ್ಟಿ, ಹಾಲಿಗೆ ನಾಗರಾಜ್, ಬಂಡೆ ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts