ಮಂಡ್ಯ: ನಗರದ ಹೊಸಹಳ್ಳಿ-ರಾಮನಹಳ್ಳಿ ವೃತದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗ ಮತ್ತು ಹೊಸಹಳ್ಳಿ-ರಾಮನಹಳ್ಳಿ ಯುವಕರು ಶ್ರೀರಾಮನವಮಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದರು. ಅಂತೆಯೇ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ವೃದ್ದಿಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಮತ್ತು ಕೊಸಂಬರಿ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಬಳಗದ ಮುಖ್ಯಸ್ಥ ಹೊಸಹಳ್ಳಿ ಶಿವು, ರಾಜ್ಯದಲ್ಲಿ ಬರಗಾಲ ನಿವಾರಣೆಯಾಗಲು ಉತ್ತಮ ಮಳೆಯಾಗಿ ಸಮೃದ್ಧಿ ಬೆಳೆ ಬರಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಬರಗಾಲ ತೊಲಗಿ ಜಿಲ್ಲೆಯು ಹಸಿರಿನಿಂದ ಕಂಗೊಳಿಸಲಿ ಶ್ರೀರಾಮ ಕೃಪೆ ತೊರಲಿ. ಬಿಸಿಲು ತಾಳಲಾದರೆ ಜನ-ಜಾನುವಾರು ಬಳಲುವಂತಾಗಿದೆ. ಕೆರೆ-ಕಟ್ಟೆಗಳಲ್ಲಿ ಕುಡಿಯಲು ನೀರು ಇಲ್ಲ. ದಾಹ ನೀಗಿಸಲು ಮಜ್ಜಿಗೆ ಮತ್ತು ಪಾನಕ ಮಾಡಿ ಜನರಿಗೆ ವಿತರಿಸಿದ್ದೇವೆ ಎಂದರು.
ಮುಖಂಡರಾದ ಜಯಣ್ಣ, ಮಾದರಾಜೇ ಅರಸು, ಅನಿಲ್, ಮಂಜುನಾಥ್, ಮಧು, ಶಂಕರ್, ಶಿವಕುಮಾರ್ ಕೆಂಪಯ್ಯ, ವಿವೇಕ್, ಪ್ರಸನ್ನ, ಬೋರಪ್ಪ ಇತರರಿದ್ದರು.