More

    ಶ್ರೀ ಕನ್ನಿಕಾಪರಮೇಶ್ವರಿಗೆ ವಿಶೇಷ ಪೂಜ

    ಗಂಗಾವತಿ: ನಗರದ ಹಿರೇಜಂತಕಲ್ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಅಧಿಕ ಶ್ರಾವಣ ಮಾಸದ ನಿಮಿತ್ತ ಸೋಮವಾರ ಮಣಿ ದೀಪ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

    ಇದನ್ನೂ ಓದಿ:http://ಶ್ರೀ ಕನ್ನಿಕಾಪರಮೇಶ್ವರಿಗೆ ವಿಶೇಷ ಪೂಜ

    ಹಿರೇಜಂತಕಲ್, ವಿರುಪಾಪುರ ಆರ್ಯ ವೈಶ್ಯ ಸಮಾಜ ಮತ್ತು ವಾಸವಿ ಮಹಿಳಾ ಮಂಡಳಿ ನೇತೃತ್ವದಲ್ಲಿ ವಿಶೇಷ ಪೂಜೆ, ಪಾರಾಯಣ, ಸಂಕೀರ್ತನೆ ಜರುಗಿತು.

    30 ಸುಮಂಗಲೆಯರನ್ನೊಳಗೊಂಡ ತಂಡ ಮಣಿ ದೀಪ ಸಂಕಲ್ಪ ಕೈಗೊಂಡಿದ್ದು, ಧಾರ್ಮಿಕ ಕೈಂಕರ್ಯಗಳ ಮೂಲಕ ಸಮಾಜದ ಸ್ವಾಸ್ತ್ಯ ಕಾಪಾಡಲಾಗುತ್ತಿದೆ. ತಿಂಗಳ ಪರ್ಯಂತ ವಿವಿಧ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ನಾಗರಾಜ್ ದರೋಜಿ ಮಾಹಿತಿ ನೀಡಿದರು.

    ಪಂ.ಭೀಮಸೇನ್‌ಭಟ್, ಮಹಿಳಾ ಮಂಡಳಿ ಪದಾಧಿಕಾರಿಗಳಾದ ಪದ್ಮಾವತಿ ದರೋಜಿ, ರಾಧಿಕಾ, ರೇಖಾ, ಉಷಾ, ರುಕ್ಮಿಣಿಬಾಯಿ, ಸಮಾಜದ ಮುಖಂಡರಾದ ಎನ್.ಗಂಗಾಧರ, ಸಿ.ಗೋಪಾಲಸ್ವಾಮಿ, ವೆಂಕಟೇಶ ದಮ್ಮೂರು, ರವಿ ಶ್ರೀಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts