More

    ಜೆಡಿಎಸ್​ ಉಚ್ಛಾಟಿತ ಶಾಸಕರಿಂದ ರಾಜೀನಾಮೆ; ದಳ ಬಿಟ್ಟು ‘ಕೈ’ ಹಿಡಿಯುತ್ತಾರಾ?

    ತುಮಕೂರು: ಇಂದು ಎಸ್ ಆರ್ ಶ್ರೀನಿವಾಸ್, ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ಇವರು ಗುಬ್ಬಿ ಕ್ಷೇತ್ರದ ಜೆಡಿಎಸ್​ನ ಉಚ್ಚಾಟಿತ ಶಾಸಕರಾಗಿದ್ದು ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರು ಎಂಬ ಆರೋಪ ಇವರ ವಿರುದ್ಧ ಕೇಳಿಬಂದಿತ್ತು.

    ಇಂದು ಬೆಳಿಗ್ಗೆ ಎಸ್​ಆರ್​ ಶ್ರೀನಿವಾಸ್, 11 ಗಂಟೆಗೆ ಸಭಾಪತಿಗಳಿಗೆ ರಾಜಿನಾಮೆ ಸಲ್ಲಿಸಲಿದ್ದಾರೆ. ಅವರನ್ನು ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆಂಬ ಆರೋಪದಡಿ ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಸ್ವ ಇಚ್ಛೆಯಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು‌ ಶಾಸಕರು ಮುಂದಾಗಿದ್ದಾರೆ.

    ರಾಜಿನಾಮೆ ನೀಡಿದ ಬಳಿಕ ಎಸ್​ಆರ್​ ಶ್ರೀನಿವಾಸ್​, ಕಾಂಗ್ರೆಸ್ ಸೇರುವುದು ಬಹುತೇಕ‌ ಫಿಕ್ಸ್ ಆಗಿದೆ. ಇಂದು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಬಳಿಕ ಕಾಂಗ್ರೆಸ್ ಸೇರಲಿದ್ದಾರೆ.

    ಇವರು, ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿನ‌ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು ಈಗಾಗಲೇ ಡಿಕೆಶಿ, ಸಿದ್ದರಾಮಯ್ಯ, ಡಾ ಜಿ ಪರಮೇಶ್ವರ್, ರಾಜಣ್ಣ ಜೊತೆ ಮಾತುಕತೆ ನಡೆಸಿದ್ದಾರೆ. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗುಬ್ಬಿ ಕ್ಷೇತ್ರದಲ್ಲಿ ಎಸ್​ಆರ್​ ಶ್ರೀನಿವಾಸ್ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts