More

    ಕ್ರೀಡಾಪಟುಗಳಿಂದ ಕಾರ್ಗಿಲ್ ವಿಜಯ್ ದಿವಸ್ ಸ್ಮರಣೆ

    ಬೆಂಗಳೂರು: ಕ್ರಿಕೆಟ್​ ದಿಗ್ಗಜರಾದ ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ, ಸೇರಿದಂತೆ ಭಾರತ ಕ್ರೀಡಾಪಟುಗಳು 21ನೇ ವರ್ಷದ ಕಾರ್ಗಿಲ್​ ವಿಜಯ್​ ದಿವಸ್​ ಸಂಭ್ರಮಾಚರಣೆಯನ್ನು ಸ್ಮರಿಸಿದ್ದಾರೆ. 1999ರ ಜುಲೈನಲ್ಲಿ ಭಾರತ ಕಾರ್ಗಿಲ್​ ಯುದ್ದಭೂಮಿಯಲ್ಲಿ ಭಾರತ, ಪಾಕಿಸ್ತಾನವನ್ನು ಬಗ್ಗು ಬಡಿದಿತ್ತು. ಅಂದಿನಿಂದ ಜುಲೈ 26ರಂದು ಕಾರ್ಗಿಲ್​ ವಿಜಯ್​ ದಿವಸ್ ದಿನ ಎಂದು​ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂಭ್ರಮಾಚರಣೆ ಹಿಂದೆ ವೀರ ಯೋಧರ ಶ್ರಮವಿದೆ ಎಂದು ಕ್ರೀಡಾಪಟುಗಳು ಟ್ವೀಟ್​ ಮಾಡಿದ್ದಾರೆ.

    ಭಾರತೀಯ ಸೇನೆಗೆ ಈ ಗೌರವ ಸಲ್ಲಬೇಕು. ನಮ್ಮೆಲ್ಲರ ಸುರತೆಗೆ ಯೋಧರ ತಮ್ಮ ಪ್ರಾಣವನ್ನೇ ಅಪಿರ್ಸಿದ್ದಾರೆ. ಅವರ ಧೈರ್ಯ ಹಾಗೂ ಸಾಹಸಕ್ಕೆ ಚಿರಋಣಿ ಎಂದು ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಟ್ವೀಟ್​ ಮಾಡಿದ್ದಾರೆ.

    ಕಾರ್ಗಿಲ್​ ಯುದ್ದದಲ್ಲಿ ನಮ್ಮ ಯೋಧರ ಶೌರ್ಯ, ನಿಸ್ವಾರ್ಥ ಸೇವೆ ಎಲ್ಲರಿಗೂ ಸ್ಫೂರ್ತಿ. ಹಲವು ವಿಸ್ಮಯಕಾರಿ ಕಥೆಗಳಿವೆ. ಯೋಧರ ಸೇವೆಯನ್ನು ನಾವು ಯಾವಾಗಲೂ ನೆನೆಯಬೇಕು ಎಂದು ದಿಗ್ಗಜ ಸಚಿನ್​ ತೆಂಡುಲ್ಕರ್​ ಟ್ವೀಟ್​ ಮಾಡಿದ್ದಾರೆ.

    ಕನ್ನಡಿಗ ಕೆಎಲ್​ ರಾಹುಲ್​, ಅಜಿಂಕ್ಯ ರಹಾನೆ, ಶೂಟರ್​ ಗಗನ್​ ನಾರಂಗ್​, ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​ ಸೇರಿದಂತೆ ಅನೇಕ ಮಂದಿ ವಿಜಯ್​ ದಿವಸ್​ ದಿನದಂದ ಯೋಧರ ಬಲಿದಾನವನ್ನು ಸ್ಮರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts